July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಮಸ್ಜಿದ್ ಮೇಲಂತಸ್ತಿನ ಕಾಮಗಾರಿಗೆ ಚಾಲನೆ

ಬೆಳ್ತಂಗಡಿ: ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಇದರ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಬಳಿಕ‌ನಡೆದ ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಬಶೀರ್ ವಹಿಸಿದ್ದರು.
ಸಮಾರಂಭದಲ್ಲಿ ದಾನಿಗಳು,‌ ನಿಡಿಗಲ್ ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷ ಮುಜೀಬ್ ಸಾಹೇಬ್, ಯುವ ಉದ್ಯಮಿ ಹಾಜಿ ಶಮೀಮ್ ಯೂಸುಫ್ ಮದ್ದಡ್ಕ, ಬಿ.ಎನ್ ಹಮೀದ್ ನಿಡಿಗಲ್, ಹನೀಫ್ ಮುಸ್ಲಿಯಾರ್ ಮೊದಲಾದವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಖತೀಬ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್, ಹಾಜಬ್ಬ, ಕೆರೀಂ ಕೆ.ಎಸ್, ಉಸ್ಮಾನ್ ಎಂ.ಕೆ, ಅಬ್ಬಾಸ್ ಸಿ, ಹಮೀದ್ ನೆಕ್ಕರೆ, ಶಬೀರ್ ಬಿಕೆಹೆಚ್, ಅಯೂಬ್ ಆಲಿಕುಂಞಿ, ಅಬ್ಬುಲ್ಲ ಹಾಜಿ, ಮುಹಮ್ಮದ್ ಜೈ ಭಾರತ್, ಬಶೀರ್ ಮಾಹಿನ್, ಮುಸ್ತಫಾ ಸಿ, ಸಿದ್ದೀಕ್ ನೆಕ್ಕರೆ, ಅಬೂಬಕ್ಕರ್ ಹಾಜಿ, ಅಶ್ರಫ್ ಇಸ್ಮಾಯಿಲ್ ಕುರುಡ್ಯ, ಕೆರೀಂ ಕುರುಡ್ಯ, ಉಸ್ಮಾನ್ ಉಂಞಿಚ್ಚ ಆಲಾಜೆ, ಬಾವಾಕ, ರಮ್ಲ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.

ಉಮ್ರಾ ಯಾತ್ರೆ ಕೈಗೊಳ್ಳುವ ಇಬ್ರಾಹಿಂ ಕನ್ಯಾಡಿ ಅವರನ್ನು ಈ ವೇಳೆ ಜಮಾಅತ್ ವತಿಯಿಂದ ಬೀಳ್ಕೊಡಲಾಯಿತು.
ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು.
ಸದರ್ ತ್ವಾಹಿರ್ ಸ‌ಅದಿ ಧನ್ಯವಾದವಿತ್ತರು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Suddi Udaya

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya

ಓಡಿಲ್ನಾಳ ಬಂಟರ ಸಂಘದ ಸಮಾಲೋಚನೆ ಸಭೆ ಹಾಗೂ ಗ್ರಾಮ ಸಮಿತಿ ರಚನೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ನ 50ನೇ ವರ್ಷದ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಪದ್ಮುಂಜ ಸಿಎ ಬ್ಯಾಂಕ್ ಸಿಬ್ಬಂದಿ ಚಿದಾನಂದ ಗೌಡ ನಿಧನ

Suddi Udaya
error: Content is protected !!