ಸುಲ್ಕೇರಿ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಬ್ರಹ್ಮಗಿರಿ ಸುಲ್ಕೇರಿ ಗುರುಪೂಜೆಯ ಪೂರ್ವ ಭಾವಿ ಸಭೆಯನ್ನು ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಫೆಬ್ರವರಿ ತಿಂಗಳಲ್ಲಿ ಗುರುಪೂಜೆ ಮಾಡುವುದೆಂದು ತೀರ್ಮಾನಿಸಿ, ಎಲ್ಲಾ ಬಿಲ್ಲವ ಭಾಂಧವರು ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸುಧೀರ್ ಎಸ್.ಪಿ, ಗೌರವ ಸಲಹೆಗಾರರಾದ ಪ್ರದೀಪ್ ನಡುಮನೆ, ಕಾರ್ಯದರ್ಶಿಯಾದ ಸುನಿಲ್ ಪೂಜಾರಿ, ಕೋಶಾಧಿಕಾರಿಯಾದ ಪ್ರಭಾಕರ ಸಿ ಪೂಜಾರಿ, ನಿರ್ದೇಶಕರಾದ ಶ್ವೇತ ನಾಗೇಶ್, ಹಾಗೂ ಸದಸ್ಯರು ಉಪಸ್ಥಿತರಿದ್ದರು.











