July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಮರಸ್ಯದ ಸಂಕ್ರಾಂತಿಗೆ ವೇಣೂರಿನಲ್ಲಿ ಚಾಲನೆ: ಪರಿಶಿಷ್ಟ ಜಾತಿ ಕುಟುಂಬಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕ ಹರೀಶ್ ಪೂಂಜ

ವೇಣೂರು: ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚುವ ದಿನ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಈ ಬಾರಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಬೆಳ್ತಂಗಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿಯ ಬಂಧುಗಳ ಕಾಲನಿಗಳಲ್ಲಿ ಜ.೧೪ರಂದು ಸಂಕ್ರಾಂತಿ ಹಬ್ಬವನ್ನು ‘ಸಾಮರಸ್ಯದ ಸಂಕ್ರಾಂತಿ’ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಆಚರಿಸಿದರು. ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಪ.ಜಾತಿ ಬಂಧುಗಳ ಕಾಲೋನಿಗಳಿಗೆ ತೆರಳಿದ ಶಾಸಕ ಹರೀಶ್ ಪೂಂಜ ಅವರು ಉಡುಗೊರೆ ಸಹಿತ ಸಾಮರಸ್ಯದ ಸಂಕ್ರಮಣದ ಶುಭ ಹಾರೈಸಿದರು. ಈ ಸರಣಿ ಕಾರ್ಯಕ್ರಮಕ್ಕೆ ವೇಣೂರು ಆದಿಶಕ್ತಿ ಭಜನಾ ಮಂದಿರದಲ್ಲಿ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ಆದ ಸಂಭ್ರಮದ ಪ್ರೇರಣೆ ಪಡೆದು ಸರ್ವರನ್ನೂ ಬಂಧುಭಾವದಿಂದ ಅಭಿವೃದ್ಧಿಯೆಡೆಗೆ ಜೊತೆಗೆ ಕರೆದೊಯ್ಯುವ ಸಂಕಲ್ಪದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ನಡೆಸಿದರು. ಪರಿಶಿಷ್ಟ ಬಂಧುಗಳು ತಯಾರಿಸಿ ಬಡಿಸಿದ ಉಪಹಾರಾದಿ ಆತಿಥ್ಯ ಸ್ವೀಕರಿಸಲಾಯಿತು. ಕಾರ್ಯಕ್ರಮದ ಚಾಲನೆ ವೇಳೆ ಸ್ಥಳೀಯ ಹಿರಿಯರು, ಜನಪ್ರತಿನಿಧಿಗಳು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

Related posts

ಶುಲ್ಕ ಪಾವತಿ ಮಾಡದ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ ಇಂದಬೆಟ್ಟು ಗ್ರಾಮ ಪಂಚಾಯತ್

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya

ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ

Suddi Udaya

ಪುದುವೆಟ್ಟು ಗ್ರಾಮ ಸಭೆ: ಕಂದಾಯ ಇಲಾಖೆಯ ಅಧಿಕಾರಿಗಳ ಗೈರು, ಗ್ರಾಮಸ್ಥರು ಅಕ್ರೋಶ

Suddi Udaya

ಅಂಡಿಂಜೆ ಗ್ರಾ.ಪಂ. ಮಕ್ಕಳ ಗ್ರಾಮಸಭೆ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಗೆ ನೆರಿಯ ಪೆಟ್ರೋ ನೆಟ್ ಸಂಸ್ಥೆಯಿಂದ ಡಿಜಿಟಲ್ ಪ್ರಾಜೆಕ್ಟರ್ ಹಸ್ತಾಂತರ

Suddi Udaya
error: Content is protected !!