25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಮರಸ್ಯದ ಸಂಕ್ರಾಂತಿಗೆ ವೇಣೂರಿನಲ್ಲಿ ಚಾಲನೆ: ಪರಿಶಿಷ್ಟ ಜಾತಿ ಕುಟುಂಬಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕ ಹರೀಶ್ ಪೂಂಜ

ವೇಣೂರು: ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚುವ ದಿನ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಈ ಬಾರಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಬೆಳ್ತಂಗಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿಯ ಬಂಧುಗಳ ಕಾಲನಿಗಳಲ್ಲಿ ಜ.೧೪ರಂದು ಸಂಕ್ರಾಂತಿ ಹಬ್ಬವನ್ನು ‘ಸಾಮರಸ್ಯದ ಸಂಕ್ರಾಂತಿ’ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಆಚರಿಸಿದರು. ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಪ.ಜಾತಿ ಬಂಧುಗಳ ಕಾಲೋನಿಗಳಿಗೆ ತೆರಳಿದ ಶಾಸಕ ಹರೀಶ್ ಪೂಂಜ ಅವರು ಉಡುಗೊರೆ ಸಹಿತ ಸಾಮರಸ್ಯದ ಸಂಕ್ರಮಣದ ಶುಭ ಹಾರೈಸಿದರು. ಈ ಸರಣಿ ಕಾರ್ಯಕ್ರಮಕ್ಕೆ ವೇಣೂರು ಆದಿಶಕ್ತಿ ಭಜನಾ ಮಂದಿರದಲ್ಲಿ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ಆದ ಸಂಭ್ರಮದ ಪ್ರೇರಣೆ ಪಡೆದು ಸರ್ವರನ್ನೂ ಬಂಧುಭಾವದಿಂದ ಅಭಿವೃದ್ಧಿಯೆಡೆಗೆ ಜೊತೆಗೆ ಕರೆದೊಯ್ಯುವ ಸಂಕಲ್ಪದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ನಡೆಸಿದರು. ಪರಿಶಿಷ್ಟ ಬಂಧುಗಳು ತಯಾರಿಸಿ ಬಡಿಸಿದ ಉಪಹಾರಾದಿ ಆತಿಥ್ಯ ಸ್ವೀಕರಿಸಲಾಯಿತು. ಕಾರ್ಯಕ್ರಮದ ಚಾಲನೆ ವೇಳೆ ಸ್ಥಳೀಯ ಹಿರಿಯರು, ಜನಪ್ರತಿನಿಧಿಗಳು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

Related posts

ಉಜಿರೆ: ಪದ್ಮನಾಭ ಕುಂಜತ್ತಾಯ ಹೃದಯಾಘಾತದಿಂದ ನಿಧನ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ  ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಧನಲಕ್ಷ್ಮೀ ಪೂಜಾರಿ ಭೇಟಿ

Suddi Udaya

ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನಲ್ಲಿ ಜಿಎಸ್‌ಟಿ ದಿನಾಚರಣೆ

Suddi Udaya

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡರಿಗೆ ಗಡಿನಾಡ ಕನ್ನಡ ಸೇವಾ ರತ್ನ ಪ್ರಶಸ್ತಿ

Suddi Udaya

ಅಹಿಶ್ಛತ್ರ ಗುರುಕುಲದಲ್ಲಿ ಸಂಸ್ಕಾರ ಶಿಬಿರದ ಸಮಾರೋಪ

Suddi Udaya

ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಗುರುವಾಯನಕೆರೆಯಲ್ಲಿ ಬೃಹತ್ ಹಿಂದೂ ಸಂಗಮ

Suddi Udaya
error: Content is protected !!