ಬೆಳ್ತಂಗಡಿ: ಹಿಂದೂ ಕಮಿಟಿ ಹರ್ಜ್ಲಿಯಾ ಇಸ್ರೇಲ್ ಇದರ ವತಿಯಿಂದ 9ನೇ ವರ್ಷದ ಅಯ್ಯಪ್ಪ ಸ್ವಾಮಿ ಪೂಜೋತ್ಸವವು ಜ.17 ರಂದು ಹರ್ಜ್ಲಿಯಾದಲ್ಲಿ ಜರುಗಿತು.
ಅರ್ಚಕರಾದ ರಾಜೇಶ್ ಸಾಲಿಯಾನ್ ಹಾಗೂ ಗಣೇಶ್ ಆಚಾರ್ಯರವರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ಭಜನಾ ಕಾರ್ಯಕ್ರಮದ ಮೂಲಕ ಅಯ್ಯಪ್ಪ ಸ್ವಾಮಿಯನ್ನು ಭಕ್ತಿಯಿಂದ ಸ್ತುತಿಸಲಾಯಿತು.
ಹಿರಿಯ ಭಜಕರಾದ ಸುಧೀರ್ ಕೋಟ್ಯಾನ್ ರವರು ನೆರೆದಿದ್ದ ಭಕ್ತಸಮೂಹದ ಪರವಾಗಿ ಸರ್ವಜನಹಿತ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಶಶಿ ಕುಂದಾಪುರರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಹಿಂದೂ ಕಮಿಟಿ ಹರ್ಜ್ಲಿಯಾ ಇದರ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.











