September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಗುರುವಾಯನಕೆರೆ ಪಾಲಡ್ಕ ಒಕ್ಕೂಟದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಕುಸುಮಾವತಿರವರ ಅಧ್ಯಕ್ಷತೆಯಲ್ಲಿ ದೀಪವನ್ನು ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಯೋಜನಾಧಿಕಾರಿ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆ ನಡೆದು ಬಂದ ದಾರಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಯೋಜನೆಯ ಕಾರ್ಯಕ್ರಮ, ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿದರು.

ಒಕ್ಕೂಟದ ವರದಿಯನ್ನು ಸವಿತಾ ಮಂಡಿಸಿದರು. ಒಕ್ಕೂಟದ ತಂಡದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜನೆ ಮಾಡಿ ಬಹುಮಾನ ವಿತರಿಸಲಾಯಿತು. ಯೋಜನೆಯ ಮೂಲ ಫಲಾನುಭವವಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ರಾಮಣ್ಣ ಗೌಡ ಅನಿಸಿಕೆ ವ್ಯಕ್ತಪಡಿಸಿದರು, ಧರ್ಣಪ್ಪ ಕುಲಾಲ್ , ಸುಮತಿ ದಂಪತಿಗಳಿಗೆ ಗೌರವಿಸಲಾಯಿತು.

ಅನಂತ್ರಾಮ ಗೌಡ, ಪಳ್ಳ ತಳ ರವರ ಕಾರ್ಯಕ್ರಮ ಉದ್ದೇಶಿಸಿ, ಯೋಜನೆಯಿಂದ ಸಿಗುವ ಸೌಲಭ್ಯವನ್ನು ಸರಿಯಾದ ಉದ್ದೇಶಕ್ಕೆ ನಾವು ಬಳಕೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಪಾಲ ಕೋಲಾಜೆ,( ಜನಜಾಗೃತಿ ವೇದಿಕೆ ಅಧ್ಯಕ್ಷರು) ಮಡಂತ್ಯಾರು ವಲಯ ಅಧ್ಯಕ್ಷ ಜಯ ಪೂಜಾರಿ, ಎಸ್.ಡಿ.ಎಮ್ ಸಿ ಅಧ್ಯಕ್ಷ ಪ್ರೀತ ಕುಮಾರ ಕುದ್ರಡ್ಕ, ಒಕ್ಕೂಟದ ಅಧ್ಯಕ್ಷ ವಿಜಯ್, ಹಾಗೂ ಡೊಮ್ಮಯ್ಯ ಶೆಟ್ಟಿಗಾರ್, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಮೇಲ್ವಿಚಾರಕರು ಕೇಶವ, ಸೇವಾಪ್ರತಿನಿಧಿ ನಂದಿನಿ, ಪರಮೇಶ್ವರ್, ಕಲಾವತಿ, ವಿಪತ್ತು ಘಟಕದ ಸ್ವಯಂ ಸೇವಕರು ಅವಿನಾಶ ಹಾಗೂ ಕಾರ್ಯಕ್ರಮವನ್ನು ಪುಪ್ಪ ನಿರೂಪಣೆ ಮಾಡಿದರು. ಶುಭಲತಾ ಸ್ವಾಗತಿಸಿದರು, ಅನುಪಮಾ ಧನ್ಯವಾದ ಮಾಡಿದರು.

Related posts

ಪಾರೆಂಕಿ: ಪರನೀರು ನಿವಾಸಿ ಮಹಿಳೆ ನಾಪತ್ತೆ: ದೂರು ದಾಖಲು

Suddi Udaya

ಮುಂಡಾಜೆಯಲ್ಲಿ ನಗರ ಸ್ವಚ್ಛತೆ

Suddi Udaya

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

Suddi Udaya

ಬೆಳ್ತಂಗಡಿ: ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ನಟ ರಮೇಶ್ ಅರವಿಂದ್ ಭೇಟಿ: ಪುಷ್ಪಗುಚ್ಚ ನೀಡಿ ಸ್ವಾಗತಿಸಿದ ಸಿರಿ ಸಿಬ್ಬಂದಿಗಳು

Suddi Udaya

ಹೊಸಂಗಡಿ ಗ್ರಾ. ಪಂ. ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Suddi Udaya
error: Content is protected !!