ಬೆಳ್ತಂಗಡಿ: ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಶನಿವಾರ 550 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ಮೀನು ಮಾಂಸ ಖರೀದಿಸಲು, ನೋಡಲು ಜನ ಮುಗಿಬಿದ್ದರು.

ಮಲ್ಪೆ ಶ್ರಿರಾಮಾಂಜನೇಯ ಬೋಟ್ ನಲ್ಲಿ ನಿನ್ನೆ ತಡರಾತ್ರಿ ಮೀನು ಬಿದ್ದಿತ್ತು. ಬೆಳಿಗ್ಗೆ ಮೀನು ಈ ಅಂಗಡಿಗೆ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಜನ ಮುಗಿಬಿದ್ದಿದ್ದರು. ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಕಾರು ನಿಲ್ಲಿಸಿ ಮೀನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಪ್ರಮುಖದ ಜಯಪ್ರಕಾಶ್ ಶೆಟ್ಡಿ ಉಜಿರೆ, ಪ್ರವೀಣ್ ಹಳ್ಳಿಮನೆ ಪತ್ರಕರ್ತ ದಿನೇಶ್ ಕೋಟ್ಯಾನ್ ಸೇರಿದಂತೆ ನೂರಾರು ಮಂದಿ ಮಾಹಿತಿ ಪಡೆದರು. ಒಂದು ಗಂಟೆಯೊಳಗೆ ಮೀನು ಮಾಂಸ ಖಾಲಿಯಾಗಿತ್ತು.











