September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯಲ್ಲಿ 550 ಕೆಜಿ ತೂಕದ ಮಡಲ್ ಮೀನು: ಖರೀದಿಸಲು ಮುಗಿಬಿದ್ದ ಗ್ರಾಹಕರು

ಬೆಳ್ತಂಗಡಿ: ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಶನಿವಾರ 550 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ಮೀನು ಮಾಂಸ ಖರೀದಿಸಲು, ನೋಡಲು ಜನ ಮುಗಿಬಿದ್ದರು.

ಮಲ್ಪೆ ಶ್ರಿರಾಮಾಂಜನೇಯ ಬೋಟ್ ನಲ್ಲಿ ನಿನ್ನೆ ತಡರಾತ್ರಿ ಮೀನು ಬಿದ್ದಿತ್ತು. ಬೆಳಿಗ್ಗೆ ಮೀನು ಈ ಅಂಗಡಿಗೆ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಜನ ಮುಗಿಬಿದ್ದಿದ್ದರು. ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಕಾರು ನಿಲ್ಲಿಸಿ ಮೀನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಪ್ರಮುಖದ ಜಯಪ್ರಕಾಶ್ ಶೆಟ್ಡಿ ಉಜಿರೆ, ಪ್ರವೀಣ್ ಹಳ್ಳಿಮನೆ ಪತ್ರಕರ್ತ ದಿನೇಶ್ ಕೋಟ್ಯಾನ್ ಸೇರಿದಂತೆ ನೂರಾರು ಮಂದಿ ಮಾಹಿತಿ ಪಡೆದರು. ಒಂದು ಗಂಟೆಯೊಳಗೆ ಮೀನು ಮಾಂಸ ಖಾಲಿಯಾಗಿತ್ತು.

Related posts

ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ

Suddi Udaya

ನಾಲ್ಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಯೋಜನೆಯಡಿ ಮಂಜೂರಾದ ವಾಕಿಂಗ್ ಸ್ಟಿಕ್ ಹಸ್ತಾಂತರ

Suddi Udaya

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 42 ಲಕ್ಷ ಲಾಭ, 110 ಕೋಟಿ ವ್ಯವಹಾರ, ಶೇ.10 ಡಿವಿಡೆಂಟ್

Suddi Udaya

ಧರ್ಮಸ್ಥಳದಲ್ಲಿ25ನೇ ವರ್ಷದ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿಯವರಿಂದ ಉದ್ಘಾಟನೆ: ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಹೆಗ್ಗಡೆ, ಮಣಿಲಶ್ರೀ ಉಪಸ್ಥಿತಿ: 115 ಭಜನಾ ಮಂಡಳಿಗಳ 202 ಮಂದಿ ಶಿಬಿರಾಥಿ೯ಗಳು ಭಾಗಿ

Suddi Udaya

ಬುರುಡೆ ಪ್ರಕರಣ: ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಮಂಡನೆ: ಸುಧೀರ್ಘ ವಾದ ಮಂಡಿಸಿದ ಎಸ್.ಐ.ಟಿ.ಪರ ವಕೀಲ ಎಪಿಪಿ ದಿವ್ಯರಾಜ್ ಹೆಗ್ಡೆ

Suddi Udaya

ಕುಣಿತ ಭಜನಾ ತರಬೇತಿಗೆ ನೂತನ ಸದಸ್ಯರುಗಳ ಸೇರ್ಪಡೆ ಕಾರ್ಯಕ್ರಮ

Suddi Udaya
error: Content is protected !!