September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಮಂಡಲ ವತಿಯಿಂದ ಹಿಂದೂ ಸಂಗಮ; ಭವ್ಯ ಶೋಭಾಯಾತ್ರೆ

ಮಡಂತ್ಯಾರು: ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ನಿರ್ವಹಣಾ ತಂಡ ಮಡಂತ್ಯಾರು ಮಂಡಲ ಮಚ್ಚಿನ, ಪಾರೆಂಕಿ, ಕುಕ್ಕಳ, ಮಾಲಾಡಿ ಹಾಗೂ ಸೋಣಂದೂರು ಗ್ರಾಮಗಳನ್ನು ಒಳಗೊಂಡ ಹಿಂದೂ ಸಂಗಮ ಜ.25 ರಂದು ಬಸವನಗುಡಿ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಮಡಂತ್ಯಾರು ಗಣಪತಿ ಮಂಟಪದಿಂದ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನ ತನಕ ನಡೆದ ಭವ್ಯಶೋಭಾಯಾತ್ರೆಗೆ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್ ಪೇಜಾವರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಶೋಭಾಯತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ಜನರು ಹಿಂದುತ್ವದ ಜಯ ಘೋಷ ಮೊಳಗಿಸಿದರು. ದೇಶಿಯ ಗೋವಿನ ಪೂಜೆ, ಭಾರತ ಮಾತೆಗೆ ಪುಷ್ಪ ಅರ್ಚನೆ, ಭಜನೆ, ಸಮಾಜದ ವಿವಿಧ ಸಾಧಕರ ಗುರುತಿಸುವಿಕೆ, ಅಯೋಧ್ಯೆ ಕರಸೇವಕರ, ತುರ್ತ ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರ ಗುರುತಿಸುವಿಕೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪಂಚಕಟ್ಟೆ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪ್ರಶಾಂತ್ ಎಂ.ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಹ ಕಾರ್ಯವಾಹಕ ಸುಧೀರ್ ಸಿದ್ಧಾಪುರ ಜೀ ಹಿಂದೂ ಸಂಗಮದ ಸಂದೇಶ ಸಾರಿದರು. ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ.ರವಿ ನಡುಬೊಟ್ಟು, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರಾದ ಹರ್ಷ ಸಂಪಿಗೆತ್ತಾಯ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್, ಮಾಣೂರು ಶ್ರೀ ಶಾಸ್ತರ ಸಹ ಪರಿವಾರ ಕ್ಷೇತ್ರದ ಅಧ್ಯಕ್ಷ ಹೊನ್ನಪ್ಪ ಕುಲಾಲ್, ಮಂಡತ್ಯಾರು ರಾಘವೇಂದ್ರ ಮಠದ ಆಡಳಿತ ಮೋಕ್ತೆಸರಾದ ಸ್ವರ್ಣಲತಾ ಹೆಗ್ಡೆ, ನಾವುಂಡ ಶ್ರೀ ನಾಗಬ್ರಹ್ಮ ಕ್ಷೇತ್ರದ ಆಡಳಿತ ಮೋಕ್ತೆಸರಾದ ವಿದ್ಯಾಧರ ಜೈನ್, ಪಾಲಡ್ಕ ಕೊರಗಜ್ಜ ಕ್ಷೇತ್ರ ಅಧ್ಯಕ್ಷ ಯಶೋಧರ ಮರಕ್ಕಡ, ಹಿಂದೂ ಸಂಗಮದ ತಾಲೂಕು ಆಯೋಜನಾ ಸಮಿತಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ, ಕಾರ್ಯದರ್ಶಿ ವಸಂತ ಮರಕಡ, ಸಂಯೋಜಕ ಅನಿಲ್ ಕುಮಾರ್ ಯು., ಉಪಾಧ್ಯಕ್ಷ ವಸಂತ ಮಜಲು, ಮಡಂತ್ಯಾರು ಮಂಡಲ ಸಂಯೋಜಕ
ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಆಯೋಜಾನ ಸಮಿತಿ ಜೊತೆ ಕಾರ್ಯದರ್ಶಿ ವೀರೇಂದ್ರ ಕುಮಾರ್
ಸ್ವಾಗತಿಸಿ, ಯಶವಂತ ಶೆಟ್ಟಿ ಮೂಡಯೂರು ವಂದಿಸಿದರು.

Related posts

ಶಿರ್ಲಾಲು ರಿಕ್ಷಾ ಚಾಲಕ-ಮಾಲಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ವೇಣೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಎಲ್.ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವಪರಿಸರ ದಿನಾಚರಣೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಸುಳ್ಳು ವದಂತಿ ಖಂಡಿಸಿ “ನಮ್ಮ ನಡೆ ಧರ್ಮಸ್ಥಳದ ಕಡೆ” : ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ “ಧರ್ಮಸ್ಥಳ ಚಲೊ ಅಭಿಯಾನ”ಧಮ೯ಸ್ಥಳಕ್ಕೆ 400 ಕಾರುಗಳಲ್ಲಿ ಬಂದ ಎರಡು ಸಾವಿರ ಭಕ್ತರು

Suddi Udaya
error: Content is protected !!