25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

ನಡ: ಇಲ್ಲಿಯ ನಡ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ಹಂದಿ ಸಾಕುವ ಶೆಡ್‌ನಿಂದ ಹಂದಿಯೊಂದನ್ನು ಚಿರತೆ ಎಳೆದೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ ಎಂದು ಸ್ಥಳೀಯರಾದ ಶ್ಯಾಮಸುಂದರ್ ನಡ ಮಾಹಿತಿ ನೀಡಿದ್ದಾರೆ.

ನಡ ಗ್ರಾಮದ ಮೂಡಾಯಿಬೆಟ್ಟು ನಿವಾಸಿ ವಿನ್ಸೆಂಟ್ ಎಂಬವರು ಹಂದಿ ಸಾಕಾಣೆ ಮಾಡುತ್ತಿದ್ದು, ಇಂದು ಬೆಳಿಗ್ಗೆ ಹಂದಿ ಸಾಕಾಣೆ ಮಾಡುವ ಶೆಡ್‌ನ ಬಳಿ ರಕ್ತದ ಕಲೆಗಳು ಕಂಡು ಬಂದಿದ್ದು, ಇವರ ಸಾಕುತ್ತಿದ್ದ ಹಂದಿಗಳಲ್ಲಿ ಒಂದು ಹಂದಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಶೆಡ್‌ಗೆ ನುಗ್ಗಿದ ಚಿರತೆ ಹಂದಿಯನ್ನು ಕಾಡಿಗೆ ಎಳೆದೊಯ್ದಿರಬಹುದೆಂದು ಸಂಶಯಿಸಲಾಗಿದೆ. ಮೂಡಾಯಿಬೆಟ್ಟು ಪರಿಸರದ ಕಾಡಿನಲ್ಲಿ ಚಿರತೆ ಓಡಾಟವಿದೆ ಎಂದು ಸ್ಥಳೀಯರಾದ ಶ್ಯಾಮ್‌ಸುಂದರ್ ನಡ ತಿಳಿಸಿದ್ದಾರೆ. ಸಮೀಪದಲ್ಲೆ ಸರಕಾರಿ ಶಾಲೆಯೊಂದಿದ್ದು, ಸ್ಥಳೀಯರಲ್ಲಿ ಆಂತಕ ಎದುರಾಗಿದೆ.

Related posts

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆ: ಶಾಲಾ ಮುಖ್ಯಮಂತ್ರಿಯಾಗಿ ಇಝಾ ಫಾತಿಮ, ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ರಿಶಾನ್ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅನಾರೋಗ್ಯದಲ್ಲಿರುವ ಗ್ರಾಮ ಪಂಚಾಯತ್ ನೌಕರರಿಗೆ ರೂ.35 ಸಾವಿರ ಆರ್ಥಿಕ ನೆರವು ಹಾಗೂ ಪಡಿತರ ವಿತರಣೆ

Suddi Udaya

ಬೆಳ್ತಂಗಡಿ: ಅರ್ಸುಲೈನ್ ಧರ್ಮಭಗಿನಿ ಸಿ. ಎಮಿಲ್ಡಾ ಕ್ರಾಸ್ತಾ ನಿಧನ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಚಾರಣೆಯ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ

Suddi Udaya

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!