25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ ಮಂಡಲ ವತಿಯಿಂದ ಹಿಂದೂ ಸಂಗಮ

ಕೊಕ್ಕಡ: ಹಿಂದೂ ಸಂಗಮ ಆಯೋಜನಾ ಕೊಕ್ಕಡ ಮಂಡಲ ವತಿಯಿಂದ ಹಿಂದೂ ಸಂಗಮ ಜ.25 ರಂದು ಕೊಕ್ಕಡದ ಸಂಕ್ರಾಂತಿ ಮೈದಾನದಲ್ಲಿ ನಡೆಯಿತು.

ಕೊಕ್ಕಡ ಮತ್ತು ಪಟ್ರಮೆ ಮಂಡಲ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮವು ಕೊಕ್ಕಡದ ಜಂಕ್ಷನ್ ನಿಂದ ಪುಟಾಣಿ ಮಕ್ಕಳ ವಿವಿಧ ವೇಷ ಗಳೊಂದಿಗೆ ಸ್ಥಳೀಯ ಭಜನಾ ತಂಡದಿಂದ ಕುಣಿತಾ ಭಜನೆ ಹಾಗೂ ಮಹಿಳೆಯರಿಂದ ಪೂರ್ಣ ಕುಂಭದೊಂದಿಗೆ ಭವ್ಯ ಶೋಭಾ ಯಾತ್ರೆಯು ನಡೆಯಿತು.

ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ರವರು ಗೋ ಪೂಜೆ ನೆರವೇರಿಸಿ ದೀಪಪ್ರಜ್ವಲಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಹಿಂದೂ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ವಕ್ತಾರರಾದ ಅಚ್ಚುತ ನಾಯಕ್ ಪುತ್ತೂರು ಮಾತನಾಡಿ ಹಿಂದುತ್ವ ಎಂದರೇನು? ಹಿಂದೂ ಹೇಗಿರಬೇಕು , ಜಾತಿ ಬೇಧ ಮರೆತು ಒಂದಾದಲ್ಲಿ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ ಎಂದರು. ಸಭಾ ಅಧ್ಯಕ್ಷತೆಯನ್ನು ವಹಿಸಿದ ಡಾ. ತಾರಾಗಣೇಶ್ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ನೈಮಿಷ ಕೊಕ್ಕಡ , ರುಕ್ಮಯ ಮಡಿವಾಳ ಕೊಕ್ಕಡ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು,

ರುಕ್ಮಯ ಮಡಿವಾಳ ಸ್ವಾಗತಿಸಿ, ಅಶ್ವಿನಿ ಓಣಿತಾರು ಧನ್ಯವಾದವಿತ್ತರು.

Related posts

ಅಶ್ವಮೇಧ ಕಾಮರ್ಸ್ ಫೆಸ್ಟ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಹೆತ್ತವರ ಸಭೆ

Suddi Udaya
error: Content is protected !!