ಬೆಳ್ತಂಗಡಿ: ಸವಣಾಲು ಗ್ರಾಮದ ದೇವಸ ಹೊಸಮನೆ, ದುರ್ಗಾನಿವಾಸದ ಪದ್ಮನಾಭ ಶೆಟ್ಟಿ (83ವ) ರವರು ಹೃದಯಾಘಾತದಿಂದ ಮೇ.28 ರಂದು ಸ್ವ ಗೃಹದಲ್ಲಿ ನಿಧನರಾದರು.
ಇವರು ಹಲವು ವರ್ಷಗಳ ಕಾಲ ಬೀಡಿ ಕಾಂಟ್ರ್ಯಾಕ್ಟರ್ ಆಗಿದ್ದರು. ಸವಣಾಲು, ಅಳದಂಗಡಿ, ಶಿರ್ಲಾಲು ಪ್ರದೇಶಕ್ಕೆ ಪ್ರಥಮವಾಗಿ ಬೀಡಿ ಬ್ರಾಂಚನ್ನು ತಂದವರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಇವರು ಪತ್ನಿ ಶಶಿಕಲಾ, ಪುತ್ರಿಯರಾದ ವಕೀಲರಾದ ಹರಿಣಾಕ್ಷಿ ಜೆ ಶೆಟ್ಟಿ, ಪವಿತ್ರಾ ಭಂಡಾರಿ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನದಲ್ಲಿ ಹಲವಾರು ಮಂದಿ ಬಾಗವಹಿಸಿದ್ದರು.












