23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಆನೆಪಿಲ ರಸ್ತೆಯ ಅಭಿವೃದ್ಧಿಗೆ ರಕ್ಷಿತ್ ಶಿವರಾಮ್ ರವರಿಂದ ಅನುದಾನ ನೀಡುವ ಭರವಸೆ

ಬೆಳ್ತಂಗಡಿ ತಾಲೂಕಿನ ಪ್ರತಿಯೊಂದು ಪ್ರದೇಶ ಕೂಡ ಅಭಿವೃದ್ಧಿ ಹೊಂದಬೇಕು ಎಂಬ ಚಿಂತನೆ ಇಟ್ಟುಕೊಂಡು ಇರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರು ಬಳಂಜ ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆನೆಪಿಲಕ್ಕೆ ಹೋಗುವ ರಸ್ತೆಯ ಪರಿಸ್ಥಿತಿಯನ್ನು ಕಂಡು ಆ ರಸ್ತೆಯಲ್ಲಿ ಆನೆಪಿಲ ತನಕ ಸಂಚರಿಸಿ ಈ ರಸ್ತೆಯ ಕುಂದುಕೊರತೆಗಳನ್ನು ಅರಿತು ಈ ರಸ್ತೆಗೆ ಒಳಪಟ್ಟ ಗ್ರಾಮಸ್ಥರಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸರಕಾರ ಮಟ್ಟದಲ್ಲಿ ಚರ್ಚಿಸಿ ಅನುದಾನವನ್ನು ತಂದು ಈ ರಸ್ತೆಯ ಕೆಲಸವನ್ನು ಮಾಡಿಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ)ಅಧ್ಯಕ್ಷ ಸತೀಶ್ ಕಾಶಿಪಟ್ಣ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಭಾಸ್ ಚಂದ್ರ ರೈ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಿನೇಶ್ ಪಿ ಕೆ, ದೇಜಪ್ಪ ಪೂಜಾರಿ, ದೇವಿಪ್ರಸಾದ್ ಶೆಟ್ಟಿ, ಬೆಳ್ತಂಗಡಿ ಕಾಂಗ್ರೆಸ್ ಉಪಾಧ್ಯಕ್ಷ ದೀಪಕ್ ಎಚ್ ಡಿ, ಬಳಂಜ ಪಂಚಾಯತ್ ಮಟ್ಟದ ಕಾರ್ಯಾಧ್ಯಕ್ಷರಾದ ಜೆರಾಮ್ ಲೋಬೊ, ಬಳಂಜ ಪಂಚಾಯತ್ ಮಟ್ಟದ ಮಾಜಿ ಅಧ್ಯಕ್ಷ ರಾಮನಾಥ ಶೆಟ್ಟಿ, ಬಳಂಜ ಪಂಚಾಯತ್ ಮಟ್ಟದ ಕಾಂಗ್ರೆಸ್ ಪಕ್ಷದ ಸಾಮಾಜಿಕಜಾಲ ಪ್ರತಿನಿಧಿಯಾದ ಅಶ್ವಿನ್ ಕುಮಾರ್ ಬಿ ಕೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಡೀಕಯ್ಯ ಕುಲಾಲ್, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಕಾರ್ಯದರ್ಶಿಗಳಾದ ಸುಂದರ ಹೆಗ್ಡೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಉಪಾಧ್ಯಕ್ಷರುಗಳಾದ ವಾಸು ಬಳಂಜ, ಪುರುಷೋತ್ತಮ ಆಚಾರಿ, ಸಾದಿಕ್ ಬಳಂಜ , ಮಹಾಗಣಪತಿ ದೇವಸ್ಥಾನ ಅಳದಂಗಡಿ ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸದಾನಂದ ತೋಟದಪಲ್ಕೇ, ಸುಧೀರ್ ಜೈನ್, ಪ್ರದೀಪ್ ಪೂಜಾರಿ, ರತ್ನಾಕರ ಪೂಜಾರಿ, ರವೀಂದ್ರ , ಸದಾನಂದ ಪೂಜಾರಿ ಅಂತರ, ವೃಷಭ ಹೆಗ್ಡೆ, ಒಲ್ಬೇ, ಮಥಾಯಿಸ್ ಕ್ರಾಸ್ತ, ಪ್ರವೀಣ್ ದೇವಾಡಿಗ ಗಾಂದೋಟ್ಟು, ಪುರಂದರ ಸುಧೀಶ್ ಪೂಜಾರಿ ಅಂತರ, ರಮೇಶ್ ದೇವಾಡಿಗ, ಓಬಯ್ಯ ದೇವಾಡಿಗ, ವಸಂತ, ಸುಧಿರ್ ಜೈನ್ , ಶೇಖರ್ ಗಾಂಧಿನಗರ, ವಿಶ್ವನಾಥ್ ಪೂಜಾರಿ, ನವೀನ್ ತೋಟದಪಲ್ಕೇ, ಅಶೋಕ್ ಕುಲಾಲ್ ತೋಟದಪಲ್ಕೇ, ಚಿತ್ತರಂಜನ್ ಹೆಗ್ಡೆ, ಜಯಕೀರ್ತಿ ಜೈನ್, ಕೇಶವಮೂಲ್ಯ, ಕೃಷ್ಣಪ್ಪ ಪೂಜಾರಿ ಅಂತರ, ಪ್ರಮೋದ್ ಅಂತರ, ಡಿಕಯ್ಯ ಪೂಜಾರಿ ಜೆರಾಲ್ಡ್ ಅಂಬ್ರಾಡಿ, ಆಲ್ವಿನ್ ಪಿಂಟೋ, ರಂಜಿತ್ ಬಳಂಜ, ವಿಶ್ವನಾಥ ಪೂಜಾರಿ ಪ್ರದೀಪ್ ಕೋಟ್ಯಾನ್ ಉಪಸ್ಥಿತರಿದ್ದರು.

Related posts

ಹಿರಿಯ ಸಾಹಿತಿ ಎನ್ ಜಿ ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

Suddi Udaya

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ಬೆಳೆ ವಿಮೆ ಯೋಜನೆ : ವಿಮಾ ಕಂತು ಪಾವತಿಗೆ ಆ.7ರ ತನಕ ಅವಕಾಶ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಆಯುಷ್ಮಾನ್ ಭವ ಆರೋಗ್ಯ ಸೇವೆಗೆ ಚಾಲನೆ

Suddi Udaya

ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಆಗುಂಬೆ ಗ್ರಾ.ಪಂ. ಗೆ ವರ್ಗಾವಣೆ

Suddi Udaya
error: Content is protected !!