ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಆನೆಪಿಲ ರಸ್ತೆಯ ಅಭಿವೃದ್ಧಿಗೆ ರಕ್ಷಿತ್ ಶಿವರಾಮ್ ರವರಿಂದ ಅನುದಾನ ನೀಡುವ ಭರವಸೆ

ಬೆಳ್ತಂಗಡಿ ತಾಲೂಕಿನ ಪ್ರತಿಯೊಂದು ಪ್ರದೇಶ ಕೂಡ ಅಭಿವೃದ್ಧಿ ಹೊಂದಬೇಕು ಎಂಬ ಚಿಂತನೆ ಇಟ್ಟುಕೊಂಡು ಇರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರು ಬಳಂಜ ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆನೆಪಿಲಕ್ಕೆ ಹೋಗುವ ರಸ್ತೆಯ ಪರಿಸ್ಥಿತಿಯನ್ನು ಕಂಡು ಆ ರಸ್ತೆಯಲ್ಲಿ ಆನೆಪಿಲ ತನಕ ಸಂಚರಿಸಿ ಈ ರಸ್ತೆಯ ಕುಂದುಕೊರತೆಗಳನ್ನು ಅರಿತು ಈ ರಸ್ತೆಗೆ ಒಳಪಟ್ಟ ಗ್ರಾಮಸ್ಥರಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸರಕಾರ ಮಟ್ಟದಲ್ಲಿ ಚರ್ಚಿಸಿ ಅನುದಾನವನ್ನು ತಂದು ಈ ರಸ್ತೆಯ ಕೆಲಸವನ್ನು ಮಾಡಿಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ)ಅಧ್ಯಕ್ಷ ಸತೀಶ್ ಕಾಶಿಪಟ್ಣ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಭಾಸ್ ಚಂದ್ರ ರೈ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಿನೇಶ್ ಪಿ ಕೆ, ದೇಜಪ್ಪ ಪೂಜಾರಿ, ದೇವಿಪ್ರಸಾದ್ ಶೆಟ್ಟಿ, ಬೆಳ್ತಂಗಡಿ ಕಾಂಗ್ರೆಸ್ ಉಪಾಧ್ಯಕ್ಷ ದೀಪಕ್ ಎಚ್ ಡಿ, ಬಳಂಜ ಪಂಚಾಯತ್ ಮಟ್ಟದ ಕಾರ್ಯಾಧ್ಯಕ್ಷರಾದ ಜೆರಾಮ್ ಲೋಬೊ, ಬಳಂಜ ಪಂಚಾಯತ್ ಮಟ್ಟದ ಮಾಜಿ ಅಧ್ಯಕ್ಷ ರಾಮನಾಥ ಶೆಟ್ಟಿ, ಬಳಂಜ ಪಂಚಾಯತ್ ಮಟ್ಟದ ಕಾಂಗ್ರೆಸ್ ಪಕ್ಷದ ಸಾಮಾಜಿಕಜಾಲ ಪ್ರತಿನಿಧಿಯಾದ ಅಶ್ವಿನ್ ಕುಮಾರ್ ಬಿ ಕೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಡೀಕಯ್ಯ ಕುಲಾಲ್, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಕಾರ್ಯದರ್ಶಿಗಳಾದ ಸುಂದರ ಹೆಗ್ಡೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಉಪಾಧ್ಯಕ್ಷರುಗಳಾದ ವಾಸು ಬಳಂಜ, ಪುರುಷೋತ್ತಮ ಆಚಾರಿ, ಸಾದಿಕ್ ಬಳಂಜ , ಮಹಾಗಣಪತಿ ದೇವಸ್ಥಾನ ಅಳದಂಗಡಿ ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸದಾನಂದ ತೋಟದಪಲ್ಕೇ, ಸುಧೀರ್ ಜೈನ್, ಪ್ರದೀಪ್ ಪೂಜಾರಿ, ರತ್ನಾಕರ ಪೂಜಾರಿ, ರವೀಂದ್ರ , ಸದಾನಂದ ಪೂಜಾರಿ ಅಂತರ, ವೃಷಭ ಹೆಗ್ಡೆ, ಒಲ್ಬೇ, ಮಥಾಯಿಸ್ ಕ್ರಾಸ್ತ, ಪ್ರವೀಣ್ ದೇವಾಡಿಗ ಗಾಂದೋಟ್ಟು, ಪುರಂದರ ಸುಧೀಶ್ ಪೂಜಾರಿ ಅಂತರ, ರಮೇಶ್ ದೇವಾಡಿಗ, ಓಬಯ್ಯ ದೇವಾಡಿಗ, ವಸಂತ, ಸುಧಿರ್ ಜೈನ್ , ಶೇಖರ್ ಗಾಂಧಿನಗರ, ವಿಶ್ವನಾಥ್ ಪೂಜಾರಿ, ನವೀನ್ ತೋಟದಪಲ್ಕೇ, ಅಶೋಕ್ ಕುಲಾಲ್ ತೋಟದಪಲ್ಕೇ, ಚಿತ್ತರಂಜನ್ ಹೆಗ್ಡೆ, ಜಯಕೀರ್ತಿ ಜೈನ್, ಕೇಶವಮೂಲ್ಯ, ಕೃಷ್ಣಪ್ಪ ಪೂಜಾರಿ ಅಂತರ, ಪ್ರಮೋದ್ ಅಂತರ, ಡಿಕಯ್ಯ ಪೂಜಾರಿ ಜೆರಾಲ್ಡ್ ಅಂಬ್ರಾಡಿ, ಆಲ್ವಿನ್ ಪಿಂಟೋ, ರಂಜಿತ್ ಬಳಂಜ, ವಿಶ್ವನಾಥ ಪೂಜಾರಿ ಪ್ರದೀಪ್ ಕೋಟ್ಯಾನ್ ಉಪಸ್ಥಿತರಿದ್ದರು.

Related posts

ಪಡಂಗಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸುಂದರ ಪೂಜಾರಿ ಅವಿರೋಧ ಆಯ್ಕೆ

Suddi Udaya

ಟಿಪ್ಪರ್ ವಾಹನದ ಬಾಡಿಗೆ ಕೇಳಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕನ್ಯಾಡಿ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

Suddi Udaya

ಹತ್ಯಡ್ಕ : ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಶಿಶಿಲ-ಅರಸಿನಮಕ್ಕಿ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರಿಂದ ತೆರವು ಕಾರ್ಯ

Suddi Udaya

ತೆಂಕಕಾರಂದೂರು ಸಂತಾನ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಕೊಕ್ಕಡ ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಬೃಹತ್ ಪ್ರತಿಭಟನೆ

Suddi Udaya
error: Content is protected !!