23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಫೆ. 5 ಮತ್ತು 6 ರಂದು ಶ್ರೀಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ವೈದಿಕ ಕಾರ್ಯಕ್ರಮಗಳು: ಫೆ.05 ಬೆಳಿಗ್ಗೆ ವೇದಘೋಷಪೂರ್ವಕ ದೇವತಾ ಪ್ರಾರ್ಥನೆ, ಅವಿಘ್ನ ಗಣಪತಿ ಪೂಜೆ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್‌ರಣ – ಮಧುಪರ್ಕ, ನವೀಕೃತ ರಾಜಾಂಗಣ ಉದ್ಘಾಟನೆ, ಭಜನಾ ಸೇವೆ ಆರಂಭ, ಶ್ರೀ ಕ್ಷೇತ್ರ ದೈವಗಳಿಗೆ ತಂಬಿಲ, ಶ್ರೀಸೂಕ್ತ ಪಾರಾಯಣ, ಅಥರ್ವ ಶೀರ್ಷ ಪಾರಾಯಣ, ಪ್ರಾಸಾದ ಶುದ್ಧಿ, ಸಗ್ರಹ ಅಷ್ಟೋತ್ತರಶತ ಮೋದಕ ಹೋಮ. ಯಾಗಶಾಲಾ ಚತುರ್ದ್ವಾರ ಪೂಜೆ, ಕಲಶಾರಾಧನೆ, ದೇವತಾ ಸ್ಥಾಪನೆ, ದೇವೀ ಸೂಕ್ತ ಪಾರಾಯಣ, ದುರ್ಗಾಸೂಕ್ತ ಪಾರಾಯಣ, ಚತುಃಷಷ್ಟಿ ಯೋಗಿನೀ ಪೂಜೆ, ಕ್ಷೇತ್ರದ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಸಂಜೆ ಅರಣಿ ಮಥನ, ಅಗ್ನಿಜನನ, ಕುಂಡ ಸಂಸ್ಕಾರ, ಅಗ್ನಿ ಪ್ರತಿಷ್ಠೆ, ವೇದ ಪಾರಾಯಣ, ಕಲಶಾರಾಧನೆ, ಅಷ್ಟಾವಧಾನ ಸೇವೆ, ಶ್ರೀಕ್ಷೇತ್ರದ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ.

ಫೆ.06 ರಂದು ಉಷಃಕಾಲ ಪೂಜೆ, ದುರ್ಗಾಯಂತ್ರಮಂಡಲ ಪೂಜೆ, ಪೂರ್ವಾಂಗ ಹೋಮ ಪ್ರಯೋಗ, ಚಂಡಿಕಾಹೋಮ, ತರ್ಪ ಬಲಿದಾನ. ಪೂರ್ಣಾಹುತಿ, ಸುವಾಸಿನೀ, ಕುಮಾರಿಕಾ, ದಂಪತಿ ಪೂಜೆ, ಕರ್ಮ ಸಮಾಪ್ತಿ, ಫಲಮಂತ್ರಾಕ್ಷತೆ, ಆಶೀರ್ವಚನ. ಶ್ರೀ ದೇವ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

Related posts

ಧರ್ಮಸ್ಥಳ; ಹದಗೆಟ್ಟ ‌ನೇರ್ತನೆ ರಸ್ತೆ; ಗ್ರಾಮಸ್ಥರಿಂದ ಶ್ರಮದಾನದ ಮೂಲಕ ದುರಸ್ತಿ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಆಗಿ ಮತ್ತೆ ಪೃಥ್ವಿ ಸಾನಿಕಂ ನೇಮಕ

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಹಿಮಾನ್ಸ್ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೀದಿ ನಾಯಿ ಕಡಿತದ ಮತ್ತು ರೇಬಿಸ್ ರೋಗದ ಬಗ್ಗೆ ಮಾಹಿತಿ

Suddi Udaya
error: Content is protected !!