22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಫೆ. 5 ಮತ್ತು 6 ರಂದು ಶ್ರೀಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ವೈದಿಕ ಕಾರ್ಯಕ್ರಮಗಳು: ಫೆ.05 ಬೆಳಿಗ್ಗೆ ವೇದಘೋಷಪೂರ್ವಕ ದೇವತಾ ಪ್ರಾರ್ಥನೆ, ಅವಿಘ್ನ ಗಣಪತಿ ಪೂಜೆ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್‌ರಣ – ಮಧುಪರ್ಕ, ನವೀಕೃತ ರಾಜಾಂಗಣ ಉದ್ಘಾಟನೆ, ಭಜನಾ ಸೇವೆ ಆರಂಭ, ಶ್ರೀ ಕ್ಷೇತ್ರ ದೈವಗಳಿಗೆ ತಂಬಿಲ, ಶ್ರೀಸೂಕ್ತ ಪಾರಾಯಣ, ಅಥರ್ವ ಶೀರ್ಷ ಪಾರಾಯಣ, ಪ್ರಾಸಾದ ಶುದ್ಧಿ, ಸಗ್ರಹ ಅಷ್ಟೋತ್ತರಶತ ಮೋದಕ ಹೋಮ. ಯಾಗಶಾಲಾ ಚತುರ್ದ್ವಾರ ಪೂಜೆ, ಕಲಶಾರಾಧನೆ, ದೇವತಾ ಸ್ಥಾಪನೆ, ದೇವೀ ಸೂಕ್ತ ಪಾರಾಯಣ, ದುರ್ಗಾಸೂಕ್ತ ಪಾರಾಯಣ, ಚತುಃಷಷ್ಟಿ ಯೋಗಿನೀ ಪೂಜೆ, ಕ್ಷೇತ್ರದ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಸಂಜೆ ಅರಣಿ ಮಥನ, ಅಗ್ನಿಜನನ, ಕುಂಡ ಸಂಸ್ಕಾರ, ಅಗ್ನಿ ಪ್ರತಿಷ್ಠೆ, ವೇದ ಪಾರಾಯಣ, ಕಲಶಾರಾಧನೆ, ಅಷ್ಟಾವಧಾನ ಸೇವೆ, ಶ್ರೀಕ್ಷೇತ್ರದ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ.

ಫೆ.06 ರಂದು ಉಷಃಕಾಲ ಪೂಜೆ, ದುರ್ಗಾಯಂತ್ರಮಂಡಲ ಪೂಜೆ, ಪೂರ್ವಾಂಗ ಹೋಮ ಪ್ರಯೋಗ, ಚಂಡಿಕಾಹೋಮ, ತರ್ಪ ಬಲಿದಾನ. ಪೂರ್ಣಾಹುತಿ, ಸುವಾಸಿನೀ, ಕುಮಾರಿಕಾ, ದಂಪತಿ ಪೂಜೆ, ಕರ್ಮ ಸಮಾಪ್ತಿ, ಫಲಮಂತ್ರಾಕ್ಷತೆ, ಆಶೀರ್ವಚನ. ಶ್ರೀ ದೇವ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

Related posts

ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ಆಯ್ಕೆ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya

ಸಿಯೋನ್ ಆಶ್ರಮ : ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡು ಮನೆ ಸೇರಿದ ಸಂದೀಪ್ ಪರಹೈ

Suddi Udaya

ತಣ್ಣೀರುಪಂತ: ಮುಂದಿಲ ನಿವಾಸಿ ಸೋಮವಾತಿ ನಿಧನ

Suddi Udaya

ಮುಂಡಾಜೆ : ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿಯ ರಥೋತ್ಸವ

Suddi Udaya
error: Content is protected !!