September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಫೆ. 5 ಮತ್ತು 6 ರಂದು ಶ್ರೀಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ವೈದಿಕ ಕಾರ್ಯಕ್ರಮಗಳು: ಫೆ.05 ಬೆಳಿಗ್ಗೆ ವೇದಘೋಷಪೂರ್ವಕ ದೇವತಾ ಪ್ರಾರ್ಥನೆ, ಅವಿಘ್ನ ಗಣಪತಿ ಪೂಜೆ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್‌ರಣ – ಮಧುಪರ್ಕ, ನವೀಕೃತ ರಾಜಾಂಗಣ ಉದ್ಘಾಟನೆ, ಭಜನಾ ಸೇವೆ ಆರಂಭ, ಶ್ರೀ ಕ್ಷೇತ್ರ ದೈವಗಳಿಗೆ ತಂಬಿಲ, ಶ್ರೀಸೂಕ್ತ ಪಾರಾಯಣ, ಅಥರ್ವ ಶೀರ್ಷ ಪಾರಾಯಣ, ಪ್ರಾಸಾದ ಶುದ್ಧಿ, ಸಗ್ರಹ ಅಷ್ಟೋತ್ತರಶತ ಮೋದಕ ಹೋಮ. ಯಾಗಶಾಲಾ ಚತುರ್ದ್ವಾರ ಪೂಜೆ, ಕಲಶಾರಾಧನೆ, ದೇವತಾ ಸ್ಥಾಪನೆ, ದೇವೀ ಸೂಕ್ತ ಪಾರಾಯಣ, ದುರ್ಗಾಸೂಕ್ತ ಪಾರಾಯಣ, ಚತುಃಷಷ್ಟಿ ಯೋಗಿನೀ ಪೂಜೆ, ಕ್ಷೇತ್ರದ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಸಂಜೆ ಅರಣಿ ಮಥನ, ಅಗ್ನಿಜನನ, ಕುಂಡ ಸಂಸ್ಕಾರ, ಅಗ್ನಿ ಪ್ರತಿಷ್ಠೆ, ವೇದ ಪಾರಾಯಣ, ಕಲಶಾರಾಧನೆ, ಅಷ್ಟಾವಧಾನ ಸೇವೆ, ಶ್ರೀಕ್ಷೇತ್ರದ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ.

ಫೆ.06 ರಂದು ಉಷಃಕಾಲ ಪೂಜೆ, ದುರ್ಗಾಯಂತ್ರಮಂಡಲ ಪೂಜೆ, ಪೂರ್ವಾಂಗ ಹೋಮ ಪ್ರಯೋಗ, ಚಂಡಿಕಾಹೋಮ, ತರ್ಪ ಬಲಿದಾನ. ಪೂರ್ಣಾಹುತಿ, ಸುವಾಸಿನೀ, ಕುಮಾರಿಕಾ, ದಂಪತಿ ಪೂಜೆ, ಕರ್ಮ ಸಮಾಪ್ತಿ, ಫಲಮಂತ್ರಾಕ್ಷತೆ, ಆಶೀರ್ವಚನ. ಶ್ರೀ ದೇವ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

Related posts

ಕನ್ಯಾಡಿ: ಗುರಿಪಳ್ಳ ಪ್ರವೀಣ್ ರೋಡ್ರಿಗಸ್ ರವರ ಮನೆಯ ಮೇಲೆ ಅಬಕಾರಿ ದಾಳಿ: 18 ಲೀ. ಕಳ್ಳಬಟ್ಟಿ ಸಾರಾಯಿ ವಶ

Suddi Udaya

ಕಡಿರುದ್ಯಾವರ ಗ್ರಾ.ಪಂ.ನಲ್ಲಿ ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಾಲು ಎಸ್.ಡಿ.ಎಂ. ಅ. ಪ್ರೌಢಶಾಲೆಗೆ ಶೇ. 93.54 ಫಲಿತಾಂಶ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್

Suddi Udaya

ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 35ನೇ ವರ್ಷದ ಮೊಸರು ಕುಡಿಕೆ ಉತ್ಸವದ ಗೌರವಾಧ್ಯಕ್ಷರಾಗಿ ಪದ್ಮನಾಭ ಸುವರ್ಣ ಬಳ್ಳಮಂಜ, ಅಧ್ಯಕ್ಷರಾಗಿ ಪ್ರಶಾಂತ್ ಎಂ. ಪಾರೆಂಕಿ ಆಯ್ಕೆ

Suddi Udaya

ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ : ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ

Suddi Udaya
error: Content is protected !!