September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ಬಗ್ಗೆ ತರಬೇತಿ

ಉಜಿರೆ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ತರಬೇತಿ ಬಗ್ಗೆ ಉಜಿರೆ ಗ್ರಾಮದ ಕಿರಿಯಾಡಿ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.

ಉದ್ಘಾಟನೆಯನ್ನು ದೇವಸ್ಥಾನದ ಅರ್ಚಕರಾದ ಕೃಷ್ಣ ಹೊಳ್ಳ ನೆರವೇರಿಸಿ ಮಾತನಾಡಿ ರೈತ ತರಬೇತಿ ಒಂದು ಬಹಳ ಉತ್ತಮವಾದ ಯೋಜನೆ ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕೃಷಿ ಸಖಿ ಭಾಗೀರಥಿ ರೈತ ತರಬೇತಿಯ ಉದ್ದೇಶಗಳು ಇಲಾಖೆಯ ವತಿಯಿಂದ ನಡೆಯುವ ವಿವಿಧ ತರಬೇತಿಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮಾಹಿತಿ ನೀಡಿದರು. ಪಶುಸಖಿ ಏಕಲತಾ ಪಶು ಇಲಾಖೆಯ ಮಾಹಿತಿಯನ್ನು ನೀಡಿದರು. ಮುಂದೆ ಸಂಪನ್ಮೂಲ ವ್ಯಕ್ತಿಗಳಾದ ಸುಲೇಮಾನ್ ಅಣಬೆ ಕೃಷಿ ಮಾಡುವ ವಿಧಾನಗಳು ಅದರ ಉದ್ದೇಶ ಅದರಿಂದ ನಮಗಾಗುವ ಲಾಭಗಳು ಪ್ರಾತ್ಯಕ್ಷಿಕೆಯ ಮೂಲಕ ಬಂದ ಎಲ್ಲಾ ರೈತರಿಗೆ ಸವಿವರವಾಗಿ ತಿಳಿಸಿದರು.

ಶಿಕ್ಷಕಿ ಸೇವಂತಿ ನಿರಂಜನ್ ಸ್ವಾಗತಿಸಿದರು. , ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ್ ಧನ್ಯವಾದವಿತ್ತರು.

Related posts

ಡಿ.6: ಲಾಯಿಲ ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಪ್ರಶ್ನಾಚಿಂತನೆ

Suddi Udaya

ಮಚ್ಚಿನ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಅಳದಂಗಡಿ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಲ್ಲೇರಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಕಾಲು ಸೇತುವೆ ಬಿರುಕು ಸಂಪರ್ಕ ಕಡಿತ ಭೀತಿ

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya
error: Content is protected !!