July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಮಹಾ ಶಿವರಾತ್ರಿ ಉತ್ಸವ ಆಚರಣೆ

ಇಂದಬೆಟ್ಟು: ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ಫೆ.15 ರಂದು ದೇವಸ್ಥಾನದ ಪ್ರಧಾನ ಅರ್ಚಕ ಆನಂದ ಭಟ್ ರವರು ದೀಪ ಪ್ರಜ್ವಲಿಸಿ ಮಾರ್ಗದರ್ಶಕರಾದ ಡಾ| ಪ್ರದೀಪ್ ಎ ರವರು ಶಿವ ಸಹಸ್ರನಾಮವನ್ನು ಭಕ್ತಾದಿಗಳು ಪಠಿಸಿದರು.

ಯಾಮದ ಪೂಜೆಯೊಂದಿಗೆ ಉತ್ಸವವು ಆರಂಭವಾಗಿ ಶ್ರೀ ಅರ್ಧನಾರೀಶ್ವರ ಸ್ವಾಮಿಗೆ ಒಟ್ಟು 9 ಯಾಮದ ಪೂಜೆ, ರುದ್ರ ಪಠಣ ದೊಂದಿಗೆ ಶತರುದ್ರಾಭಿಷೇಕ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಇಂದಬೆಟ್ಟು, ನಾವೂರು, ನಡ ಕನ್ಯಾಡಿ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮದಿಂದ ಹಾಗೂ ತಾಲೂಕಿನ ವಿವಿಧ ಭಾಗದ ಭಕ್ತರಿಂದ ಶಿವನಾಮ ಸಂಕೀರ್ತನೆಯೊಂದಿಗೆ ಕ್ಷೇತ್ರಕ್ಕೆ ಪಾದಯಾತ್ರೆ, ವಿವಿಧ ಭಜನಾ ತಂಡಗಳಿಂದ ಭಕ್ತಿ ಗಾಯನ ಕಮ್ಮಟ ಭಜನೆ, ರಂಗಪೂಜೆ, ಉಪಹಾರ ಹಾಗೂ ಭಕ್ತರಿಂದ ಪ್ರಾತಃ ಕಾಲದ ಯಾಮದ ಪೂಜೆ ವರೆಗೆ ಜಾಗರಣೆ ನಡೆದು ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ನಡೆದು ಮಹಾ ಶಿವರಾತ್ರಿ ಉತ್ಸವವು ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಕಮ್ಮಟ ಭಜನೆ ದೀಪ ಪ್ರಜ್ವಲನೆಯನ್ನು ಗ್ರಾಮದ ಹಿರಿಯರು ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಗಂಗಾಧರ ಗೌಡ ನೆರವೇರಿಸಿದರು., ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ದಂಪತಿಗಳು, ಮಾರ್ಗದರ್ಶಕರಾದ ಡಾ| ಪ್ರದೀಪ್ ಎ ರವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಸಮಿತಿಯ ಪದಾಧಿಕಾರಿಗಳು, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಇಂದಬೆಟ್ಟು ಗುತ್ತುವಿನ ಅಜಿತ್ ಕುಮಾರ್ ಜೈನ್, ಊರಿನ ಗಣ್ಯರು, ಹಿರಿಯರು ಕಿರಿಯರು ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಅರ್ಧನಾರೀಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು.

Related posts

ಉರುವಾಲು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ

Suddi Udaya

ಬಾರ್ಯ : ಪಿಲಿಗೂಡು ಬನ್ನೆಂಗಳ ಹಾಲು ಉತ್ಪಾದಕರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಎರಡು ಲಕ್ಷ ದೇಣಿಗೆ ಹಸ್ತಾಂತರ

Suddi Udaya

ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

Suddi Udaya

ಓಡಿಲ್ನಾಳ ಸ ಉ.ಪ್ರಾ .ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಲಾಯಿಲದಲ್ಲಿ ಗುರುಪೂಜೆ ಹಾಗೂ ಪ್ರೋತ್ಸಾಹಧನ ವಿತರಣೆ

Suddi Udaya

ಭಾರೀ ಗಾಳಿ ಮಳೆ: ಬಾಜಾರು, ಪಿಲಿಗೂಡು, ಸರಳಿಕಟ್ಟೆಯಲ್ಲಿ ರಸ್ತೆಗಳಿಗೆ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿ

Suddi Udaya
error: Content is protected !!