July 23, 2026
ಧಾರ್ಮಿಕ

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ದೈವಗಳಿಗೆ ಪಂಚಪರ್ವ- ಕೋಟಿ ಚೆನ್ನಯರ ದರುಶನ ಸೇವೆ

ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ಫೆ.21ರಂದು ಗಣಪತಿ ಹೋಮ, ದೈವಗಳಿಗೆ ಪಂಚಪರ್ವ, ಶ್ರೀ ಸತ್ಯನಾರಾಯಣ ಪೂಜೆ ಸಂಜೆ ಬ್ರಹ್ಮಬೈದರ್ಲು ಕೋಟಿ ಚೆನ್ನಯರ ದರುಶನ ಸೇವೆ ನೆರವೇರಿತು.

ಫೆ.21 ಶನಿವಾರ ಬೆಳಿಗ್ಗೆ 8 ಕ್ಕೆ ಪಾಪಿನಡೆ ಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲನಾಗ ಬನದಲ್ಲಿ ನಾಗಬ್ರಹ್ಮದೇವರಿಗೆ ತನು ತಂಬಿಲ ಸೇವೆ, ಧರ್ಮ ದೈವಗಳಿಗೆ ಪಂಚಪರ್ವ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಶುದ್ಧಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಗಂಟೆ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾಶಿ ಮಠ ವಾರಣಾಸಿ ಇವರ ಕ್ಷೇತ್ರಕ್ಕೆ ಆಗಮಿಸಿದ್ದು, ಅವರನ್ನು ಭವ್ಯವಾದ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ಬಳಿಕ ಬ್ರಹ್ಮಬೈದೆರ್ಲು ಕೋಟಿ ಚೆನ್ನಯರ ದರುಶನ ಸೇವೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಿತು. ಫೆ.22 ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ದೈವಗಳಿಗೆ ಆಗೇಲು ಸೇವೆ ಸಂಜೆ ಗಂಟೆ 6 ಕ್ಕೆ ಕುಪ್ಪೆಟ್ಟಿ ದೈವಗಳಿಗೆ ಪಂಚಪರ್ವ ಆಗೇಲು ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ಹಾಗೂ ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಇದರ ಅಧ್ಯಕ್ಷ ರಾಜೀವ, ಉಪಾಧ್ಯಕ್ಷ ಡಾ.ಚಂದ್ರಾವತಿ ನೂಜೇಲು, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಕೋಶಾಧಿಕಾರಿ ಬ್ರಿಜೇಶ್ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಅಂತ್ರಂಗೆ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು, ಜಗನ್ನಾಥ ಪಾಪಿನಡೆ, ನಿತಿನ್ ಗೇರುಕಟ್ಟೆ, ಜಗನ್ನಾಥ ಪೂಜಾಫಲ, ಶಶಿಧರ ಬೆಳ್ಳಾರಿ, ಶುಭಕರ ಸುಳ್ಳೋಡಿ, ಹೇಮಾವತಿ ಕೊಡಿಬಾಳೆ, ಅರುಣ್

ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಉಮೇಶ್ ನಾವರ, ಹರ್ಷಿತ್ ಕರಂಬಾರು,ನೋಣಯ್ಯ ಹಿಬರೋಡಿ, ಜಯಾನಂದ ಕುಮಟ, ನವೀನ ಹಿಮರಡ್ಡ, ಸುಧಾಕರ ಮಾಡಾವು
ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್ ರಾಜ್ ನೂಜೇಲು, ಶ್ರೀಕಾಂತ್ ಕಡಿಗೇರುಬೆಟ್ಟು, ಚಿದಾನಂದ ಮಾನರೊಟ್ಟು, ಬಾಬು ಪೂಜಾರಿ ಪರನೀರು


, ಸೋಮಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗುತ್ತಿನ ಮನೆಯವರು ಬರ್ಕೆಯವರು, ಗ್ರಾಮಸ್ಥರು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಎಜಿಎಂ ಅಮಿತ್ ಶೆಟ್ಟಿ ದಂಪತಿ ಭೇಟಿ

Suddi Udaya

ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಒಕ್ಕೂಟಗಳ ಪದಗ್ರಹಣ ಮತ್ತು ಸತ್ಯನಾರಾಯಣ ಪೂಜೆ

Suddi Udaya

ಶ್ರೀ ಕ್ಷೇತ್ರ ಸೌತಡ್ಕಕ್ಕೆ ನಟಿ ರಚಿತಾ ರಾಮ್ ಭೇಟಿ

Suddi Udaya

ಏ.24-26: ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್

Suddi Udaya

ಶಿರ್ಲಾಲು: ಶ್ರೀ ರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಐತಿಹಾಸಿಕ ಕಾಜೂರು ಮಖಾಂ ಉರೂಸ್ ಉದ್ಘಾಟನೆ: ಅಲ್ಲಾಹನ‌ ನೋಟ ಹೃದಯಕ್ಕೆ ಮಾತ್ರ; ವೈಎಂಕೆ ಡಾ. ಅಬ್ದುಲ್ಲ ಕುಂಞಿ

Suddi Udaya
error: Content is protected !!