September 6, 2026
ಧಾರ್ಮಿಕ

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ದೈವಗಳಿಗೆ ಪಂಚಪರ್ವ- ಕೋಟಿ ಚೆನ್ನಯರ ದರುಶನ ಸೇವೆ

ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ಫೆ.21ರಂದು ಗಣಪತಿ ಹೋಮ, ದೈವಗಳಿಗೆ ಪಂಚಪರ್ವ, ಶ್ರೀ ಸತ್ಯನಾರಾಯಣ ಪೂಜೆ ಸಂಜೆ ಬ್ರಹ್ಮಬೈದರ್ಲು ಕೋಟಿ ಚೆನ್ನಯರ ದರುಶನ ಸೇವೆ ನೆರವೇರಿತು.

ಫೆ.21 ಶನಿವಾರ ಬೆಳಿಗ್ಗೆ 8 ಕ್ಕೆ ಪಾಪಿನಡೆ ಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲನಾಗ ಬನದಲ್ಲಿ ನಾಗಬ್ರಹ್ಮದೇವರಿಗೆ ತನು ತಂಬಿಲ ಸೇವೆ, ಧರ್ಮ ದೈವಗಳಿಗೆ ಪಂಚಪರ್ವ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಶುದ್ಧಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಗಂಟೆ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾಶಿ ಮಠ ವಾರಣಾಸಿ ಇವರ ಕ್ಷೇತ್ರಕ್ಕೆ ಆಗಮಿಸಿದ್ದು, ಅವರನ್ನು ಭವ್ಯವಾದ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ಬಳಿಕ ಬ್ರಹ್ಮಬೈದೆರ್ಲು ಕೋಟಿ ಚೆನ್ನಯರ ದರುಶನ ಸೇವೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಿತು. ಫೆ.22 ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ದೈವಗಳಿಗೆ ಆಗೇಲು ಸೇವೆ ಸಂಜೆ ಗಂಟೆ 6 ಕ್ಕೆ ಕುಪ್ಪೆಟ್ಟಿ ದೈವಗಳಿಗೆ ಪಂಚಪರ್ವ ಆಗೇಲು ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ಹಾಗೂ ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಇದರ ಅಧ್ಯಕ್ಷ ರಾಜೀವ, ಉಪಾಧ್ಯಕ್ಷ ಡಾ.ಚಂದ್ರಾವತಿ ನೂಜೇಲು, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಕೋಶಾಧಿಕಾರಿ ಬ್ರಿಜೇಶ್ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಅಂತ್ರಂಗೆ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು, ಜಗನ್ನಾಥ ಪಾಪಿನಡೆ, ನಿತಿನ್ ಗೇರುಕಟ್ಟೆ, ಜಗನ್ನಾಥ ಪೂಜಾಫಲ, ಶಶಿಧರ ಬೆಳ್ಳಾರಿ, ಶುಭಕರ ಸುಳ್ಳೋಡಿ, ಹೇಮಾವತಿ ಕೊಡಿಬಾಳೆ, ಅರುಣ್

ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಉಮೇಶ್ ನಾವರ, ಹರ್ಷಿತ್ ಕರಂಬಾರು,ನೋಣಯ್ಯ ಹಿಬರೋಡಿ, ಜಯಾನಂದ ಕುಮಟ, ನವೀನ ಹಿಮರಡ್ಡ, ಸುಧಾಕರ ಮಾಡಾವು
ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್ ರಾಜ್ ನೂಜೇಲು, ಶ್ರೀಕಾಂತ್ ಕಡಿಗೇರುಬೆಟ್ಟು, ಚಿದಾನಂದ ಮಾನರೊಟ್ಟು, ಬಾಬು ಪೂಜಾರಿ ಪರನೀರು


, ಸೋಮಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗುತ್ತಿನ ಮನೆಯವರು ಬರ್ಕೆಯವರು, ಗ್ರಾಮಸ್ಥರು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Related posts

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಆಚರಣೆ

Suddi Udaya

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya

ಫೆ.15 (ನಾಳೆ) ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಲ್ಲಿ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ “ಅಕ್ಷಯ ಪಾಕಶಾಲೆ” ಲೋಕಾರ್ಪಣೆ

Suddi Udaya

ಏ.24: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ

Suddi Udaya

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇಗುಲದ ಅಷ್ಠಬಂಧ ಬ್ರಹ್ಮಕಲಶ: ಧಾರ್ಮಿಕ ಸಭೆ

Suddi Udaya
error: Content is protected !!