25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಸಂಘ-ಸಂಸ್ಥೆಗಳು

ವೇಣೂರು: ಬಜಿರೆ ಬತ್ತಾರುನಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಸಂಪನ್ನ

ಬೆಳ್ತಂಗಡಿ : ಲವ್ ಜಿಹಾದ್, ಮತಾಂತರ, ವಕ್ಫ್ ಕಾಯ್ದೆ ಮತ್ತು ದೇವಸ್ಥಾನಗಳ ಸರ್ಕಾರೀಕರಣದಂತಹ ಭೀಕರ ಆಪತ್ತುಗಳಿಂದ ಹಿಂದೂ ಸಮಾಜವನ್ನು ರಕ್ಷಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದೇ ಏಕೈಕ ಪರ್ಯಾಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಡಾ. ಪ್ರಣವ್ ಮಲ್ಯ ತಿಳಿಸಿದರು.

ಅವರು ಶ್ರೀ ವಿಘ್ನೇಶ್ವರ ಭಜನಾ ಮಂದಿರ ಬಜಿರೆ ಬತ್ತಾರು, ವೇಣೂರು ನಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಸಂಘಟಿತರಾಗುವ ಮೂಲಕ ರಾಷ್ಟ್ರ ಜಾಗೃತಿ ಸಭೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಂಖನಾದ ಮತ್ತು ವೇದಮಂತ್ರಗಳ ಸಾತ್ತ್ವಿಕ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮವು ಹಿಂದೂ ಸಮಾಜದ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿತು.

ಪ್ರಣವ್ ಮಲ್ಯ ಮಾತನಾಡಿ ಸಂವಿಧಾನವು ಹಿಂದೂಗಳಿಗೆ ಅಭಿಪ್ರಾಯಗಳನ್ನು ಮತ್ತು ಅವುಗಳ ಪ್ರಸಾರ ಮಾಡುವ ಅಧಿಕಾರವನ್ನು ನೀಡಿರುತ್ತದೆ. ಹಿಂದೂ ರಾಷ್ಟ್ರದ ಸಂಕಲ್ಪನೆಯ ಪ್ರಸಾರವನ್ನು ಮಾಡುವುದು ಹಿಂದುಗಳ ಸಂವಿಧಾನದತ್ತ ಅಧಿಕಾರವಾಗಿದೆ. ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಸಾತ್ತ್ವಿಕ ಜನರ ರಾಷ್ಟ್ರವಾಗಿದೆ; ಇದನ್ನು ವಿರೋಧಿಸುವುದು ಮತಾಂಧರ ನಿತ್ಯದ ಕೆಲಸವಾಗಿದೆ ಎಂದರು. ಸಮಿತಿಯು ಕಳೆದ 24 ವರ್ಷಗಳಿಂದ 2500ಕ್ಕೂ ಹೆಚ್ಚು ಸಭೆಗಳ ಮೂಲಕ ಲಕ್ಷಾಂತರ ಜನರಲ್ಲಿ ಧರ್ಮಜಾಗೃತಿ ಮೂಡಿಸುತ್ತಿದ್ದು, ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಹಿಂದೂ ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು.

ಸನಾತನ ಸಂಸ್ಥೆಯ ತೀರ್ಥೇಶ್ ಮಾರ್ಗದರ್ಶನ ನೀಡುತ್ತಾ, ‘ಯತೋ ಧರ್ಮಸ್ತತೋ ಜಯಃ’ ಎಂಬಂತೆ ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯ ನಿಶ್ಚಿತ ಎಂದು ನುಡಿದರು. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದಕ್ಕಿಂತ ನಮ್ಮ ಪ್ರತಿಯೊಂದು ಕೃತಿ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು; ಪಾಶ್ಚಾತ್ಯ ಅಂಧಾನುಕರಣೆ ಬಿಟ್ಟು ಶಾಸ್ತ್ರಬದ್ಧವಾಗಿ ಧರ್ಮಾಚರಣೆ ಮಾಡಿದಾಗ ಮಾತ್ರ ಆತ್ಮಬಲ ವೃದ್ಧಿಯಾಗಿ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ, ಆದ್ದರಿಂದ ಪ್ರತಿಯೊಂದು ಹಬ್ಬ ಮತ್ತು ಸಂಪ್ರದಾಯಗಳ ಹಿಂದಿರುವ ವೈಜ್ಞಾನಿಕ ಧರ್ಮಶಾಸ್ತ್ರವನ್ನು ಅರಿತು ಶ್ರದ್ಧೆಯಿಂದ ಆಚರಿಸುವ ಮೂಲಕ ಕರ್ಮನಿಷ್ಠ ಹಿಂದೂಗಳಾಗೋಣ ಎಂದು ಅವರು ಉಪಸ್ಥಿತರಿಗೆ ಕರೆ ನೀಡಿದರು.

ಧರ್ಮ ಪ್ರೇಮಿ ರಾಜೇಂದ್ರ ಕುಮಾರ್ ಜೈನ್ ಮಾತನಾಡಿಇತರ ಪಂಥದವರಲ್ಲಿ ಚಿಕ್ಕಂದಿನಿಂದಲೇ ಅವರ ಧರ್ಮದ ಶಿಕ್ಷಣ, ಅವರ ಧಾರ್ಮಿಕ ಗ್ರಂಥಗಳ ಅಭ್ಯಾಸಗಳು ಸಿಕ್ಕಿರುತ್ತವೆ. ಸಾಧಾರಣ 16 ವರ್ಷ ತುಂಬುವಾಗ ಅವರು ಅವರಲ್ಲಿನ ಧಾರ್ಮಿಕ ಶಿಕ್ಷಣ ಹಾಗೂ ಆಚರಣೆಯನ್ನು ಕಲಿತಿರುತ್ತಾರೆ.ಆದರೆ ನಮ್ಮ ಹಿಂದೂ ಧರ್ಮದಲ್ಲಿ ಇಂತಹ ವ್ಯವಸ್ಥೆಗಳು ಇಲ್ಲದಿರುವುದರಿಂದ ನಾವು ಅದಪತನದತ್ತ ಸಾಗುತ್ತಿದ್ದೇವೆ.ಆದುದರಿಂದ ಇನ್ನು ಮುಂದೆ ನಮ್ಮಲ್ಲಿ ಕೂಡ ಇಂತಹ ವ್ಯವಸ್ಥೆಗಳು ಆಗುವುದು ಅನಿವಾರ್ಯವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಜಯ ಶಂಕರ ಹೆಗ್ಡೆ, ಸುನಿಲ್ ಪೂಜಾರಿ, ಸಂದೀಪ್ ಹೆಗ್ಡೆ, ಪ್ರವೀಣ್ ಆಂಕರ್ಜಾಲ್, ಕಾಶಿನಾಥ ಹೆಗ್ಡೆ, ಗಿರೀಶ್ ಕುಲಾಲ್, ವಿಶ್ವನಾಥ ಆಚಾರ್ಯ, ಪ್ರಶಾಂತ್ ಹೆಗ್ಡೆ, ಗೋಪಾಲ್ ಆಚಾರ್ಯ, ಶಶಿಕುಮಾರ್ ಇಂದ್ರ, ಸುರೇಶ್ ಕುಮಾರ್ ಆರಿಗ ಪೆರ್ಮಾನು ಗುತ್ತು, ಮಲ್ಲಿಕಾ ಕಾಶಿನಾಥ್, ಸುಚಿತ್ರ, ಲೀಲಾವತಿ, ಚಂದ್ರಶೇಖರ ಭಟ್ ಅರ್ಕಲು, ವಿಜಯ್ ಹೆಗ್ಡೆ, ವಿಜಯಕುಮಾರ್ ಕೆರೆ ಕೋಡಿ, ಹರೀಶ್ ಶೆಟ್ಟಿ, ಮೋನಪ್ಪ ಗೌಡ, ಶಿವಾನಂದ ಗೌಡ, ರಘು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Related posts

ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಮುಂಜಾಗ್ರತಾ ಕ್ರಮವಾಗಿ ಶಾಸಕ ಹರೀಶ್ ಪೂಂಜರಿಂದ ಅಧಿಕಾರಿಗಳ ಸಭೆ

Suddi Udaya

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ನಡೆದ ಘಟನೆ: ನದಿಯಲ್ಲಿ ಕಾಲು ಜಾರಿ ಬಿದ್ದು ನಾವೂರಿನ ಯುವಕ ಮನ್ಸೂರ್ ಮೃತ್ಯು

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವಿಶೇಷ ಸಭೆ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ನಾಳೆ (ಜ.14): ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನಾರಾವಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ.ಜಾತಿಯ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾಂತಿ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ನಲ್ಲಿ ಡಾ. ಬಿ. ಯಶೋವರ್ಮರವರ ಸವಿನೆನಪಿನಲ್ಲಿ ತಾಂತ್ರಿಕ ವಿಷಯಗಳ ವಿನಿಮಯ ವಿಶೇಷ ಉಪನ್ಯಾಸ

Suddi Udaya
error: Content is protected !!