September 6, 2026
ಸಮಸ್ಯೆ

ಚಾರ್ಮಾಡಿ: ಕಕ್ಕಿಂಜೆ-ಬೆಂದ್ರಾಳ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿಗೆ ಗ್ರಾಮಸ್ಥದ ಆಗ್ರಹ

ಚಾರ್ಮಾಡಿ: ಕಕ್ಕಿಂಜೆ-ಬೇಂದ್ರಾಳಕ್ಕೆ ಹೋಗುವ ರಸ್ತೆಯ ಮಧ್ಯೆ ರೆಜಿನ ನರ್ಸರಿ ಬಳಿ ಒಣಗಿರುವ ಅಕೇಶಿಯಾದ ಮರಗಳು ಅಪಾಯದ ಸ್ಥಿತಿಯಲ್ಲಿದ್ದು ಇದರ ತೆರವಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಮರಗಳು ಯಾವುದೇ ಸಂದರ್ಭದಲ್ಲೂ ರಸ್ತೆಗೆ ಬೀಳುವ ಸಂಭವವಿದ್ದು, ಮಾ.5ರಂದು ಇದೆ ರಸ್ತೆಯಲ್ಲಿ ವಾಹನವೊಂದು ಸಂಚರಿಸುವಾಗ ಒಣಗಿರುವ ಮರದ ಕೊಂಬೆ ವಾಹನದ ಮೇಲೆ ಬಿದ್ದಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾನೆ.

ಈ ಬಗ್ಗೆ ಸ್ಥಳೀಯರೊಬ್ಬರು ವಲಯ ಅರಣ್ಯ ಅಧಿಕಾರಿಗೆ ತಿಳಿಸಿದ್ದು, ಅವರು ಅರಣ್ಯ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲಿಸಿ ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಗಳನ್ನು ತೆರವು ಮಾಡಿ ಕೊಡಬೇಕು ಎಂದು ತಿಳಿಸಿದ್ದರು. ಆದರೆ ಮೆಸ್ಕಾಂ ಇಲಾಖೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಝೀರ್ ಆರೋಪಿಸಿದ್ದಾರೆ.

Related posts

ಕರಾಯ ವಿದ್ಯುತ್ ಫೀಡರುಗಳಲ್ಲಿ ನಾಳೆ (ಆ.8) ವಿದ್ಯುತ್ ನಿಲುಗಡೆ

Suddi Udaya

ಪಟ್ರಮೆ ಬಸ್ ನಿಲ್ದಾಣದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಛೇರಿ ಶ್ರೀ ವಿಷ್ಣು ಕಾಂಪ್ಲೆಕ್ಸ್‌ನ ಕಟ್ಟಡಕ್ಕೆ ಸ್ಥಳಾಂತರ

Suddi Udaya

ಕಡಿರುದ್ಯಾವರ: ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ

Suddi Udaya

ಮಳೆ ಹಾನಿಗೊಳಗಾದ ನೆರಿಯ, ಚಿಬಿದ್ರೆ ಗ್ರಾಮಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ: ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಿಸುವ ಭರವಸೆ

Suddi Udaya

ಭಾರಿ ಮಳೆಗೆ: ಪುತ್ತಿಲ ನಡುಕೇರ್ಯದಲ್ಲಿ ಬರೆ ಕುಸಿತ

Suddi Udaya

ಗುರುವಾಯನಕೆರೆಯಲ್ಲಿ ಹೊಂಡಗಳ ಹಾವಳಿ: ವಾಹನ ಸವಾರರ ಪರದಾಟ – ತಕ್ಷಣ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

Suddi Udaya
error: Content is protected !!