32.9 C
ಪುತ್ತೂರು, ಬೆಳ್ತಂಗಡಿ
March 6, 2026
ಸಮಸ್ಯೆ

ಮೂಡುಕೋಡಿ: ಮನೆಯಂಗಳದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಳಿಂಗ ಸರ್ಪ

ವೇಣೂರು: ಮೂಡುಕೋಡಿ ಗ್ರಾಮದ ಬೊಮ್ಮನಟ್ಟ ವಿಶ್ವನಾಥ ಪೂಜಾರಿ ಅವರ ಮನೆಯ ಅಂಗಳದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಮನೆ ಮಂದಿಯನ್ನು ಕ೦ಡ ಸರ್ಪ ಗದ್ದೆಯ ಪಕ್ಕದ ಗುಹೆಯಲ್ಲಿ ಅವಿತುಕೊಂಡದನ್ನು ಗಮನಿಸಿದ ಸ್ಥಳಿಯ ನಿವಾಸಿ ಸ೦ದೇಶ್ ಪಿ.ಎನ್. ಸ್ಥಳಿಯ ಗ್ರಾ.ಪಂ. ಸದಸ್ಯ ಅನೂಪ್ ಜೆ. ಪಾಯಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಅನೂಪ್ ಅವರು ವೇಣೂರು ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿದರು. ಕಾಳಿಂಗ ಸರ್ಪ ಎ೦ದು ಖಚಿತಗೊಂಡು ವೇಣೂರು ಉಪವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಮಾರ್ಗದರ್ಶನದ೦ತೆ ಕೋಬ್ರಾ ಹಿಡಿಯಲು ಕಾವಳಕಟ್ಟೆಯ ಸ್ನೇಕ್ ಪ್ರಸಾದ್ ಅವರನ್ನು ಕರೆಸಿಕೊ೦ಡು ಕಾಳಿ೦ಗನನ್ನು ಸೆರೆ ಹಿಡಿದು ರಕ್ಷಿಸಲಾಯಿತು. ಅಪಾಯಕಾರಿ ಕೋಬ್ರಾನನ್ನು ಕೆಲವೇ ಘಂಟೆಗಳಲ್ಲಿ ಸೆರೆ ಹಿಡಿಯಲು ತುರ್ತಾಗಿ ಸಹಕರಿಸಿದ ಸದಸ್ಯ ಅನೂಪ್ ಜೆ. ಪಾಯಸ್ ರವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅರಣ್ಯ ಇಲಾಖಾ ಸಿಬ್ಬ೦ದಿ ರೋನಾಲ್ಡ್ ಡಿಸೋಜ ಸೇರಿ ಹಲವರು ಸಹಕರಿಸಿದರು.

Related posts

ಆನೆ ಸಂತ್ರಸ್ತರ ಹೋರಾಟ ಸಮಿತಿ ಕಡಿರುದ್ಯಾವರ ಅಧ್ಯಕ್ಷರಾಗಿ ಸಂತೋಷ್ ಗೌಡ ವಳಂಬ್ರ

Suddi Udaya

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

Suddi Udaya

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ನ್ಯಾಯತರ್ಪು: ಬೃಹತ್‌ ಗಾತ್ರದ ಹೆಬ್ಬಾವು ಕೋಳಿ ಗೂಡಿನಲ್ಲಿ ಪತ್ತೆ

Suddi Udaya

ಅಭಿವೃದ್ಧಿ ಕಾಮಗಾರಿಗೆ ತಡೆ ಆರೋಪ: ಇಳಂತಿಲದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya
error: Content is protected !!