24 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ಮೂರು ಚಿರತೆಗಳು ಎದುರಾದ ಘಟನೆ ಮಾ.10 ರಂದು ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ. ಚಿರತೆಯನ್ನು ಕಂಡ ವ್ಯಕ್ತಿ ಭಯ ಭೀತರಾಗಿ ತಕ್ಷಣವೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿ ಚಿರತೆಗಳನ್ನು ಕಾಡಿಗೆ ಅಟ್ಟಲಾಗಿದೆ.

ಕೊಂಚ ಬಿಡುವು ನೀಡಿ ಮತ್ತೆ ಕಾಣಿಸಿದ ಚಿರತೆ:
ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆದವರೆಗೆ ಬೆಳ್ತಂಗಡಿ ಪಟ್ಟಣ, ಕಲ್ಮಂಜ, ಮುಂಡಾಜೆ, ನಡ, ಕಳಿಯ, ವೇಣೂರು, ಅಂಡಿಂಜೆ, ಸುಲ್ಕೇರಿ, ತಣ್ಣೀರುಪಂತ, ಮಚ್ಚಿನ ಸಹಿತ ನಾನಾ ಗ್ರಾಮಗಳಲ್ಲಿ ಚಿರತೆಗಳು ಸಂಚಾರ ನಡೆಸಿ ಜನರಲ್ಲಿ ಭಯದ ಭೀತಿಯ ವತಾವರಣ ನಿರ್ಮಿಸಿದ್ದವು. ನಡ ಗ್ರಾಮದ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೋರ್ವನಿಗೆ ಚಿರತೆ ಎದುರಾದ ಘಟನೆಯು ನಡೆದಿತ್ತು. ಅನೇಕ ಗ್ರಾಮಗಳಲ್ಲಿ ಮುಂಜಾನೆ ಟ್ಯಾಪಿಂಗ್ ನಡೆಸುವ ವ್ಯಕ್ತಿಗಳಿಗೆ ಪದೇ ಪದೇ ಚಿರತೆಗಳು ಎದುರಾಗಿದ್ದವು.

ಕಳೆದ 20 ದಿನಗಳಿಂದ ಚಿರತೆಗಳ ಓಡಾಟದ ವರದಿ ಪ್ರಕಟವಾಗಿರಲಿಲ್ಲ ಆದರೆ ಇದೀಗ ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆವಿರುವುದು ಸ್ಪಷ್ಟಗೊಂಡಿದೆ. ಬೆಳ್ತಂಗಡಿ ನಗರಕ್ಕೂ ಚಿರತೆ ಲಗ್ಗೆ ಇಟ್ಟಿದ್ದವು, ನಡ ಗ್ರಾಮದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಸೆರೆಯಾಗಿತ್ತು.

Related posts

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ತುಕಾರಾಮ್ ಬಿ.

Suddi Udaya

ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Suddi Udaya

ಜೆಸಿಐ ಮಡಂತ್ಯಾರು “ವಿಜಯ 2024” ವತಿಯಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ವಿ.ಎ.ಓ ಪರೀಕ್ಷೆ : ವಿದ್ಯಾಮಾತಾದಿಂದ ಉಚಿತ ತರಬೇತಿ ಕಾರ್ಯಾಗಾರ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ : ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!