26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ಮೂರು ಚಿರತೆಗಳು ಎದುರಾದ ಘಟನೆ ಮಾ.10 ರಂದು ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ. ಚಿರತೆಯನ್ನು ಕಂಡ ವ್ಯಕ್ತಿ ಭಯ ಭೀತರಾಗಿ ತಕ್ಷಣವೇ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿ ಚಿರತೆಗಳನ್ನು ಕಾಡಿಗೆ ಅಟ್ಟಲಾಗಿದೆ.

ಕೊಂಚ ಬಿಡುವು ನೀಡಿ ಮತ್ತೆ ಕಾಣಿಸಿದ ಚಿರತೆ:
ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆದವರೆಗೆ ಬೆಳ್ತಂಗಡಿ ಪಟ್ಟಣ, ಕಲ್ಮಂಜ, ಮುಂಡಾಜೆ, ನಡ, ಕಳಿಯ, ವೇಣೂರು, ಅಂಡಿಂಜೆ, ಸುಲ್ಕೇರಿ, ತಣ್ಣೀರುಪಂತ, ಮಚ್ಚಿನ ಸಹಿತ ನಾನಾ ಗ್ರಾಮಗಳಲ್ಲಿ ಚಿರತೆಗಳು ಸಂಚಾರ ನಡೆಸಿ ಜನರಲ್ಲಿ ಭಯದ ಭೀತಿಯ ವತಾವರಣ ನಿರ್ಮಿಸಿದ್ದವು. ನಡ ಗ್ರಾಮದ ಕನ್ಯಾಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೋರ್ವನಿಗೆ ಚಿರತೆ ಎದುರಾದ ಘಟನೆಯು ನಡೆದಿತ್ತು. ಅನೇಕ ಗ್ರಾಮಗಳಲ್ಲಿ ಮುಂಜಾನೆ ಟ್ಯಾಪಿಂಗ್ ನಡೆಸುವ ವ್ಯಕ್ತಿಗಳಿಗೆ ಪದೇ ಪದೇ ಚಿರತೆಗಳು ಎದುರಾಗಿದ್ದವು.

ಕಳೆದ 20 ದಿನಗಳಿಂದ ಚಿರತೆಗಳ ಓಡಾಟದ ವರದಿ ಪ್ರಕಟವಾಗಿರಲಿಲ್ಲ ಆದರೆ ಇದೀಗ ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆವಿರುವುದು ಸ್ಪಷ್ಟಗೊಂಡಿದೆ. ಬೆಳ್ತಂಗಡಿ ನಗರಕ್ಕೂ ಚಿರತೆ ಲಗ್ಗೆ ಇಟ್ಟಿದ್ದವು, ನಡ ಗ್ರಾಮದಲ್ಲಿ ಚಿರತೆಯೊಂದು ಬೋನ್‌ನಲ್ಲಿ ಸೆರೆಯಾಗಿತ್ತು.

Related posts

ಅ.2 ರಂದು “ಪುರ್ಸ ಕಟ್ಟುನ ಇನಿ- ಕೋಡೆ – ಎಲ್ಲೆ” ಸಾಕ್ಷ ಚಿತ್ರ ಬಿಡುಗಡೆ

Suddi Udaya

ಮಿತ್ತಬಾಗಿಲು: ಕೊಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.14 ಡಿವಿಡೆಂಟ್

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪದವಿಪೂರ್ವ ಕಾಲೇಜು ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮದ್ದಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನವಮಿ ಉತ್ಸವ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ತೇಪೆ ಕಾಮಗಾರಿ ಆರಂಭ: ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ

Suddi Udaya
error: Content is protected !!