24.3 C
ಪುತ್ತೂರು, ಬೆಳ್ತಂಗಡಿ
June 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಬಡೆಕ್ಕಾವು ದೈವ ಕಂಬಳ ಮುಹೂರ್ತ

ನಾವೂರು ಬಡೆಕ್ಕಾವು ಗುತ್ತು ಗ್ರಾಮದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮುಹೂರ್ತ
ಮಾ.14 ರ ಮೀನಾ ಸಂಕ್ರಮಣದಂದು ಅರ್ಚಕ ಅನಂತರಾಮ ಉಪಾಧ್ಯಾಯ ಪೌರೋಹಿತ್ಯದಲ್ಲಿ ನೆರವೇರಿ ತುಳುನಾಡಿನ ದೈವದ ಕಂಬಳಕ್ಕೆ ಮತ್ತು ತುಳುವರ ಧಾರ್ಮಿಕ ನಂಬಿಕೆಗೆ ಅವಿನಾಭಾವ ಸಂಬಂಧವಿದೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕಂಬಳ ಮಹತ್ವವನ್ನು ಪಡೆದುಕೊಂಡಿದ್ದು ಈ ಕಾಲಘಟ್ಟದಲ್ಲಿ ದೈವ ಸೇವೆ ಎಂದು ಕಂಬಳ ನಡೆಯುತ್ತಿರುವುದು ಬಹಳ ಅಪರೂಪ
ಇಲ್ಲಿಯ ಸಂಸ್ಕೃತಿ ಮತ್ತು ದೈವರಾದನೆ ಹಾಗೂ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಜಾನಪದ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಂಬಳ ಮುಹೂರ್ತವನ್ನು ಸಾಂಕೇತಿಕವಾಗಿ ನಡಗುತ್ತು ಧನಂಜಯ ಅಜ್ರಿ ನೆರವೇರಿಸಿದರು.

ಪ್ರಮುಖರಾದ ವಿಜಯ ಕುಮಾರ್ ಕಂಗಿನ ಮನೆ, ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ರಕ್ಷಿತ್ ಅಜಿಲ ಬಡೆಕ್ಕಾವು, ಸತೀಶ್ ದಂಪತಿಗಳು ಬೊಳ್ಳೂರುಗುತ್ತು, ಜಿನೇಂದ್ರ ಕುಮಾರ್ ಈದು, ಶಾಂತಪ್ರಸಾದ್ ಬಂಟ್ವಾಳ, ವಸಂತ ಪೂಜಾರಿ ಇಡ್ಯಾಲ, ಜಾರಪ್ಪ ಮೂಲ್ಯ ಕಾರ್ಮಿನಡ್ಕ, ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ, ಊರಿನ ಎಲ್ಲಾ ಭಕ್ತರು ಚಾಕರಿಯವರು ಗುತ್ತು ಬರ್ಕೆಯವರು, ದೈವದ ಪರಿಚಾರಕರು ವಿನಯದವರು ಪರ ಊರಿನವರು ಉಪಸ್ಥಿತರಿದ್ದರು. ವರದಿ: ರತ್ನಾಕರ ನಾವೂರು

Related posts

ಕುವೆಟ್ಟು ಬೂತ್ 114ರಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ

Suddi Udaya

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಜನ ಸಹಭಾಗಿತ್ವದಲ್ಲಿ 8ನೇ ವರ್ಷದ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16529 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya

ನಾಳೆ (ಎ.9) ವಿದ್ಯುತ್ ನಿಲುಗಡೆ

Suddi Udaya
error: Content is protected !!