May 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ “ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭ: ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಸಿಂಚನ ಪಿ ರಾವ್ ರಿಂದ ಪೋಸ್ಟರ್ ಅನಾವರಣ

ಉಜಿರೆ: ಉಜಿರೆಯ ಮಾಡ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿರುವ ಹಾಗೂ ಸದಾ ನಗುಮೊಗದ ಸೇವೆಯನ್ನು ನೀಡುತ್ತಿರುವ ಸುಧಾಕರ ಆಚಾರ್ಯ ರವರ ಮಾಲಕತ್ವದ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ ಚಿನ್ನದ ಬೆಲೆ ಸುರಕ್ಷಿತಗೊಳಿಸಲು ಗ್ರಾಹಕರಿಗಾಗಿ ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭಗೊಂಡಿರುತ್ತದೆ.

ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಉಜಿರೆಯ ಸಿಂಚನ ಪಿ ರಾವ್ ಅವರು ಗೋಲ್ಡ್ ಸ್ಕೀಮ್ ನ ಪೋಸ್ಟರ್ ನ್ನು ಇತ್ತೀಚಿಗಷ್ಟೇ ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಸುಧಾಕರ ಆಚಾರ್ಯ, ಸಾಂಘವಿ ಡಿಸೈನ್ಸ್ ಮಾಲಕ ರಾಜೇಂದ್ರ ಗೌಡ ಮತ್ತು ಸತ್ಯನಾರಾಯಣ ಫ್ಯಾನ್ಸಿ ಮಾಲಕ ಆನಂದ ಪೂಜಾರಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಶುಭ ಗೋಲ್ಡ್ ಯೋಜನೆಯ ಲಾಭಗಳು:- ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷಿತ. ಕಂತು ಪಾವತಿಯ ದಿನದ ಚಿನ್ನದ ದರದಲ್ಲಿ ನಿವ್ವಳ ತೂಕದ ಚಿನ್ನ ಖಾತೆಗೆ ಜಮಾ. ಕಂತು ಪಾವತಿಗೆ ಮಿತಿಯಿಲ್ಲ. ಅವಧಿ ಪೂರ್ಣ ಕಂತು ಪಾವತಿಗೆ ಬೋನಸ್ ಕೊಡಲಾಗುವುದು.

ಷರತ್ತುಗಳು: ಚಿನ್ನ – ಬೆಳ್ಳಿ ಆಭರಣ ರೂಪದಲ್ಲಿ ಮಾತ್ರ ಕೊಡಲಾಗುವುದು.
ಸದಸ್ಯರು ತಿಂಗಳ ಕಂತನ್ನು ಪ್ರತೀ ತಿಂಗಳ 15ನೇ ತಾರೀಕಿನೊಳಗೆ ಪಾವತಿಸತಕ್ಕದ್ದು.
NEFT/UPI ಮುಖಾಂತರ ಪಾವತಿಸಿದ್ದಲ್ಲಿ ‘Screenshot’ ಅನ್ನು 916 4 916 2 88 ನಂಬರ್‌ಗೆ WhatsApp ಮಾಡತಕ್ಕದ್ದು.
ಯೋಜನೆ ಪೂರ್ಣಗೊಳ್ಳುವ ಮೊದಲೇ ಕಟ್ಟಿದ ಕಂತಿನ ಮೌಲ್ಯದ ಆಭರಣ ಪಡೆದುಕೊಂಡಲ್ಲಿ ಬೋನಸ್ ಪಡೆಯಲು ಅರ್ಹರಲ್ಲ. ಯೋಜನೆಯ ಕೊನೆಗೆ ಅಥವಾ ಮುಂದಿನ 30 ದಿನಗಳ ಒಳಗಾಗಿ ಚಿನ್ನ-ಬೆಳ್ಳಿ ಆಭರಣಗಳನ್ನು ಮಾಡಿಕೊಡಲಾಗುವುದು. ಯೋಜನೆಯ ಕೊನೆಯಲ್ಲಿ ತಮ್ಮ ಕಾರ್ಡ್ ಕಡ್ಡಾಯ.

Related posts

ಪಣಕಜೆ ವಿಜಯ ಸಾಲ್ಯಾನರವರ ಮನೆಗೆ ಬಿದ್ದ ಮರ

Suddi Udaya

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya

ಧರ್ಮಸ್ಥಳ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಲಾಯಿಲ: ಬೆರ್ಕೆ ರಸ್ತೆಯಲ್ಲಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ ದಂಡ ವಿಧಿಸಿದ ಲಾಯಿಲ ಗ್ರಾ.ಪಂ.

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!