26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ – ಎ. 2: ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ – ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ

ಬಜಿರೆ: ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ ಇಲ್ಲಿಯ ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ ಹಾಗೂ ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವವು ಎ.2ರಂದು ಜರಗಲಿದೆ ಎಂದು ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಬಜಿರೆ ಗ್ರಾಮದ ಬಾಡಾರು ಎಂಬ ಊರಲ್ಲಿ ಸುಮಾರು 450 ವರ್ಷಕ್ಕಿಂತ ಹಿಂದಿನಿಂದಲೂ ದೈವದ ಸೇವೆ ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ವರ್ಷ ಕೊರಗಕಲ್ಲು ಕೊರಗಜ್ಜ ದೈವಕ್ಕೆ ಊರ ಹತ್ತು ಸಮಸ್ತರು ಆಗೇಲು ಹಾಗೂ ಕೊರಗಜ್ಜನಿಗೆ ನರ್ತನ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೊರಗಜ್ಜ ದೈವವು ಬಾಡಾರು ಎಂಬ ಊರಲ್ಲಿ ಇದ್ದರೂ ತನ್ನ ಪ್ರದೇಶಕ್ಕೆ ತನ್ನ ಕಲ್ಲಿನ ಹೆಸರನ್ನು ಇಟ್ಟುಕೊಂಡು ಕೊರಗಕಲ್ಲು ಕೊರಗಜ್ಜ ಎಂಬ ನಾಮಾಂಕಿತದಿಂದ ಭಕ್ತರಿಂದ ಕರೆಸಿಕೊಂಡು ಕಾರ್ಣಿಕದ ಶಕ್ತಿಯಾಗಿ ನೆಲೆಯಾಗಿದ್ದಾರೆ.

15 ವರ್ಷಕ್ಕಿಂತ ಹಿಂದಿನವರೆಗೆ ಕೊರಗಜ್ಜ ದೈವವು ಬಚ್ಚಿರ್ ಎಂಬ ಮರದ ಬುಡದಲ್ಲಿ ನೆಲದಮೇಲೆ ಕಲ್ಲಿನಲ್ಲಿ ನೆಲೆ ನಿಂತು ಭಕ್ತರಿಂದ ಸೇವೆಯನ್ನು ಸ್ವೀಕರಿಸಿಕೊಂಡು ಬರುತ್ತಿದ್ದು, 15 ವರ್ಷದ ಹಿಂದೆ ದೈವದ ಅಭಯದ ನುಡಿಯಂತೆ, ಚಿಕ್ಕ ಕಟ್ಟೆ ಮಾಡಿ ಆರಾಧಿಸಿಕೊಂಡು ಬರಲಾಗುತ್ತಿದೆ. ಬಳಿಕ ಕೊರಗಜ್ಜನಿಗೆ ಒಂದು ಗುಡಿಯನ್ನು ನಿರ್ಮಿಸಲಾಗಿದ್ದು, ದೈವದ ಕಾರಣಿಕದಿಂದ ಈಗ ಬಾಡಾರು ಹತ್ತು ಸಮಸ್ತರ ಕೈಯಿಂದ ಸೇವೆಯನ್ನು ಸ್ವೀಕರಿಸಿಕೊಂಡು ಬರುತ್ತಿದ್ದಾರೆ. ದ.ಕ ಜಿಲ್ಲೆಯ ಹಲವು ತಾಲೂಕುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಸುಮಾರು 10 ವರ್ಷದ ಹಿಂದೆ ಕೊರಗಜ್ಜ ದೈವದ ಗುಡಿಯು ನವೀಕರಣಗೊಂಡಿದೆ. ಈ ಸಾನಿಧ್ಯದಲ್ಲಿ ಪ್ರತಿ ಸಂಕ್ರಮಣದಂದು ಸಂಕ್ರಾAತಿ ಸೇವೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದ್ದು, ಇದಕ್ಕಾಗಿ ಊರಿನ ಜನರು ಕೊರಗಜ್ಜ ದೈವದ ಕಟ್ಟೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಮೇಲ್ಚಾವಣಿಯನ್ನು ಮಾಡುವುದೆಂದು ಸಂಕಲ್ಪಮಾಡಿದ್ದಾರೆ.

ಅಲ್ಲದೆ ರಾಜ ಗುಳಿಗ ದೈವಕ್ಕೆ ಕಟ್ಟೆ, ಕೊರಗಜ್ಜ ದೈವ ಮತ್ತು ರಾಜ ಗುಳಿಗ ದೈವಗಳಿಗೆ ಮೇಲ್ಚಾವಣಿ ಮತ್ತು ಸಾನಿಧ್ಯಕ್ಕೆ ಆಗತ್ಯ ಬೇಕಾಗಿರುವ ಮೂಲಸೌಕರ್ಯಗಳನ್ನು ಒದಗಿಸಲು ಅಂದಾಜು ಸುಮಾರು ರೂ.40 ಲಕ್ಷ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ದಿನ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಕೆಲಸ ಭರದಿಂದ ಸಾಗುತ್ತಿದೆ. ಎ.2ರಂದು ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ ಹಾಗೂ ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಮತ್ತು ಕೊರಗಜ್ಜ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರಗಲಿದೆ.

ಇದೀಗ ಮೇಲ್ಚಾವಣಿಯ ಕೆಲಸ ಕಾರ್ಯಗಳನ್ನು ಊರ ಭಕ್ತರು ಸೇರಿ ರಾತ್ರಿ ಹಗಲೆನ್ನದೆ ಭಕ್ತಿಯಿಂದ ದುಡಿಯುತ್ತಿದ್ದಾರೆ.

Related posts

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಬೆದ್ರಬೆಟ್ಟು ಮರಿಯಾ0ಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸ್ಪೆಕ್ಟ್ರಾ-2024” ವಿಜ್ಞಾನ ಮಾದರಿ ವಸ್ತು ಪ್ರದರ್ಶನ

Suddi Udaya

ಬೆಳ್ತಂಗಡಿ :ರಿಕ್ಷಾ ಚಾಲಕ ನೀಲಯ್ಯ ಗೌಡ ನಿಧನ

Suddi Udaya

ಕಂಚಿಮಾರ್ ಟೈಗರ್ಸ್ ಧರ್ಮಸ್ಥಳ ನೇತೃತ್ವದಲ್ಲಿ ಹುಲಿವೇಷ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಜಾತ್ರೆ ಪ್ರಯುಕ್ತ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಬ್ರಹ್ಮಕಲಶ ಪೂರ್ವಭಾವಿ ಸಭೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!