ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಬಾಭವನ ಗೇರುಕಟ್ಟೆ ಶಾಖೆಯಲ್ಲಿ ಹನುಮ ಜಯಂತಿಯನ್ನು ಆಚರಿಸಲಾಯಿತು.
ಹನುಮಾನ್ ಚಾಲೀಸ್ ಪಠಣ,ಭಜನೆ, ಹನುಮ ನಮಸ್ಕಾರದೊಂದಿಗೆ ನಿತ್ಯ ಯೋಗ ಅಭ್ಯಾಸವನ್ನು ಮಾಡಲಾಯಿತು.
ಸತೀಶ್ ಭಂಡಾರಿ ನಾಳ ಹನುಮ ಜಯಂತಿಯ ಬಗ್ಗೆ ಬೌದ್ಧಿಕ ನೀಡಿದರು.
ಈ ಸಂದರ್ಭದಲ್ಲಿ ಅಶೋಕ ಆಚಾರ್ಯ, ವರದಿ ಪ್ರಮುಖ ಕೇಶವ ಪೂಜಾರಿ, ಸಂಚಾಲಕರಾದ ವಿಜಯ, ದಿವಾಕರ ಆಚಾರ್ಯ ಗೇರುಕಟ್ಟೆ ಶಿವಣ್ಣ ಆಚಾರ್ಯ, ಭಾರತಿ ಎಂಎಲ್, ಅರುಣ, ಪದ್ಮಲತಾ ಮೊದಲಾದವರು ಉಪಸ್ಥಿತರಿದ್ದರು.












