ಮಡoತ್ಯಾರು: ಹನುಮ ಜಯಂತಿ ಪ್ರಯುಕ್ತ SPYSS ಯೋಗ ಶಿಕ್ಷಣ ಸಮಿತಿ ಬಸವನಗುಡಿ ಮಡಂತ್ಯಾರು ಇದರ ಯೋಗ ತರಗತಿಯು ಶ್ರೀ ಕಾಮದೇನು ಶ್ರೀ ಗುರು ರಾಘವೇಂದ್ರ ಬೃಂದಾವನ ಕಾರ್ಯಸಿದ್ದಿ ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿಯಲ್ಲಿ ನಡೆಸಲಾಯಿತು.

ದೇವಸ್ಥಾನದ ಆಡಳಿತ ಮುಖ್ಯಸ್ಥೆ ಸ್ವರ್ಣ ಲತಾ ವಸಂತ ಹೆಗ್ಡೆ, ಸಹ ಶಿಕ್ಷಕ ಜಗದೀಶ್, ಯೋಗ ಬಂಧುಗಳಾದ ಗೀತಾ ಮತ್ತು ನಾರಾಯಣ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.

ಯೋಗ ಬಂಧು ಶಿವಶಂಕರ ನಿರೂಪಿಸಿದರು, ಭಜನೆ, ಅಮೃತ ವಾಚನ, ಪಂಚಾಂಗ ಪಠಣದೊಂದಿಗೆ ಯೋಗಾಭ್ಯಾಸ ಮಾಡಲಾಯಿತು. ಸುರೇಶ್ ಹನುಮ ಜಯಂತಿ ಬಗ್ಗೆ ಸವಿವಿವರವಾಗಿ ಬೌದ್ದಿಕ್ ನೀಡಿದರು., ಸಹ ಶಿಕ್ಷಕರಾದ ಗಣೇಶ್, ಸುಧಾಕರ, ಸುಕೇಶ್ ಹಾಗೂ ಸುಮಾರು 50 ಕ್ಕೂ ಹೆಚ್ಚು ಯೋಗ ಬಂಧುಗಳು ಪಾಲ್ಗೊಂಡರು.












