September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶುಭಾರಂಭ

ಉಜಿರೆಯಲ್ಲಿ ಜಿ-ಮಾಲ್ ಉದ್ಘಾಟನೆ: ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ: ಶರತ್‌ಕೃಷ್ಣ ಪಡ್ವೆಟ್ನಾಯ

ಉಜಿರೆ: ಗೋವರ್ಧನಗಿರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ನಂದಗೋಕುಲ ಸಾತ್ವಿಕ ಸಾಮ್ರಾಜ್ಯ, ಗೋಕುಲ ಮಾರ್ಟ್, ಎಂಪವರ್ ಇಂಟೀರ್ಯಸ್ ಇದರ ನೂತನ ಶಾಖೆ ಜಿ ಮಾಲ್ ಏ.೬ರಂದು ಉಜಿರೆಯ ಫನತೀರ್ ಲಾಡ್ಜ್ ನಲ್ಲಿ ಉದ್ಘಾಟನೆಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ದೇಶದಲ್ಲಿ ಯುವ ಶಕ್ತಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ. ಸಂಸ್ಥೆಯು ಒಳ್ಳೆಯ ಸೇವೆಯನ್ನು ನೀಡುವ ಮೂಲಕ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಶೇಷ ಆಕರ್ಷಣೆ ತುಳು ಚಲನಚಿತ್ರ ನಟ ತುಳುನಾಡ ನವರಸ ನಾಯಕ ಭೋಜರಾಜ ವಾಮಂಜೂರು, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಂಸ್ಥೆಯ ಸಂಸ್ಥಾಪಕರು, ಗೋವರ್ಧನಗಿರಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರು ನಿಶಾನ್ ಕೃಷ್ಣ ಭಂಡಾರಿ, ಡೆಸ್ಟಿನಿ ಇನ್ಫೋ ಸಿ.ಇ.ಓ ಚಂದ್ರಶೇಖರ ಪೂಜಾರಿ, ಗೋಕುಲ ಮಾರ್ಟ್ ಸಿ.ಇ.ಓ. ಲೋಹಿತ್ ಕುಮಾರ್ ಶೆಟ್ಟಿ, ಎಂಪವರ್ ಇಂಟೀರಿಯರ್ಸ್ ಸಿ.ಇ.ಓ., ಕಿಶನ್ ಆಚಾರ್ಯ, ಅಂತರಾಷ್ಟ್ರೀಯ ತರಬೇತುದಾರ ಅಬ್ದುಲ್ ರಜಾಕ್, ಎಫ್.ಎಂ. ಗ್ರೂಪ್ ಮಾಲಕ ಅಬ್ದುಲ್ ರಶೀದ್, ನಾಮ್‌ದೇವ್ ರಾವ್, ಬ್ಯಾಂಕ್‌ನ ನಿರ್ದೇಶಕ ಚಂದ್ರಶೇಖರ್, ಶಶಿಕುಮಾರ್, ಕೋಟೆ ಮಲ್ಲೇಶ್, ನಿತ್ಯಾನಂದ, ಕಿಶನ್ ಪಿಜಿ, ಗೋಕುಲ ಮಾರ್ಚ್ ಲೋಹಿತ್ ಶೆಟ್ಟಿ, ಸುಬೋಧ್, ಚಂದ್ರಪ್ಪ ಬಿ ಚಿತ್ರದುರ್ಗ, ಸುರೇಶ್ ಕಾಂಚನ್, ಭರತ್ ರಾಜ್ ಉಡುಪಿ, ಶ್ರೀನಾಥ್ ಒಳಲ್‌ಕೆರೆ, ದುರ್ಗೇಶ್ ಭಟ್, ರತ್ನಾಕರ ಶೆಟ್ಟಿ, ಜಯಕುಮಾರ್, ಶಿವಪ್ರಸಾದ್, ಸಂಗೀತ ರಾವ್ ಬೆಳಾಲು, ಆದರ್ಶ್ ಸುಳ್ಯ, ಸತೀಶ್ ವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಜಿರೆ ಶಾಖೆಯ ಸದಸ್ಯರು, ಪಾಲುದಾರರು, ಸ್ಥಳೀಯ ಮಳಿಗೆ ಮಾಲರು, ಗ್ರಾಹಕರು ಉಪಸ್ಥಿತರಿದ್ದರು.

ಉಜಿರೆ ಬಳಗದಿಂದ ಸಂಸ್ಥೆಯ ಸಂಸ್ಥಾಪಕರು, ಗೋವರ್ಧನಗಿರಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರು ನಿಶಾನ್ ಕೃಷ್ಣ ಭಂಡಾರಿ ಅವರಿಗೆ ಸನ್ಮಾನವನ್ನು ನಡೆಸಲಾಯಿತು. ನಂದಗೋಕುಲ ಸಾತ್ವಿಕ ಸಾಮ್ರಾಜ್ಯದ ಸಿಇಒ ದೀಪಕ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿಗಳು ಬುಲ್ ಬುಲ್ಸ್ ಗೀತಾ ಗಾಯನದಲ್ಲಿ ದ್ವಿತೀಯ

Suddi Udaya

ಉಜಿರೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ರಾಣಿ ಅಬ್ಬಕ್ಕ ರಥಯಾತ್ರೆ

Suddi Udaya

ಉಜಿರೆ ಎಸ್.ಡಿ.ಎಂ ರತ್ನಮಾನಸ : ಅಕ್ಷರ ಜ್ಞಾನ ಶಿಬಿರ ಸಂಪನ್ನ

Suddi Udaya

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಚಿನ್ಮಯ್ ಗೆ ಡಿ ವೀರೇಂದ್ರ ಹೆಗ್ಗಡೆ ದಂಪತಿಗಳು, ಹಾಗೂ ಡಿ. ಹರ್ಷೇಂದ್ರ ಕುಮಾರ್ ರವರಿಂದ ಅಭಿನಂದನೆ

Suddi Udaya

ಮುಂಡಾಜೆ : ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

Suddi Udaya
error: Content is protected !!