ಬೆಳ್ತಂಗಡಿ : ಹೊಸಪಟ್ಣ ಇಲ್ಲಿಯ ನೈನಾಡು ಇರ್ವತ್ತೂರು ಕುಡಮೇರು ಮನೆಯ ವಠಾರ ಹಾಕಿರುವ ಭವ್ಯ ರಂಗಮಂಟಪದಲ್ಲಿ ಎಪ್ರಿಲ್ 11 ಶನಿವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಕೀರ್ತಿಶೇಷ ಕುಡುಮೇರು ದಿ| ಬೊಮ್ಮಣ್ಣ ಪೂಜಾರಿಯವರ ಪುಣ್ಯ ಸ್ಮರಣೆಯೊಂದಿಗೆ ಹರಕೆಯ ಬಯಲಾಟವಾಗಿ ಶ್ರೀ ದೇವಿ ಮಹಾತ್ಮೆ ಎಂಬ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ.
ಈ ಸೇವೆಯಾಟವು ಶ್ರೀಮತಿ ಗುಲಾಬಿ ಮತ್ತು ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಕುಡುಮೇರು ಇವರಿಂದ ನಡೆಯಲಿದ್ದು, ಸಂಜೆ 5.30ಕ್ಕೆ ಚೌಕಿ ಪೂಜೆ, ಸಂಜೆ ೬ರಿಂದ ಯಕ್ಷಗಾನ ಪ್ರಾರಂಭಗೊಳ್ಳಲಿದೆ. ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.












