ಬೆಳ್ತಂಗಡಿ: ಯಕ್ಷದ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕ ಪುಂಜಾಲಕಟ್ಟೆ ಇದರ ಮಹಾಸಭೆಯು ಇತ್ತೀಚೆಗೆ ಮುರುಗೇಂದ್ರ ಸಭಾಭವನದಲ್ಲಿ, ಅಧ್ಯಕ್ಷೆ ಉಮಾ ಡಿ.ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿದ್ಯಾರತ್ನ ಪ್ರಶಸ್ತಿ ಬಂದ ಇವರಿಗೆ ಮಹಿಳಾ ಘಟಕದ ವತಿಯಿಂದ ಸನ್ಮಾನ ನಡೆಯಿತು.

ಘಟಕದ ಗೌರವ ಮಾರ್ಗದರ್ಶಕರಾದ ಲಕ್ಷ್ಮಿ ಸಂಜೀವ ಶೆಟ್ಟಿ , ಮುಗೆರೋಡಿ ಗೌರವ ಸಲಹೆಗಾರರಾದ ತುಳಸಿ ಹಾರಬೆ, ಉಪಾಧ್ಯಕ್ಷೆ ರೇಖಾ ಆನಂದ ಶೆಟ್ಟಿ , ಪಟ್ಲ ಸತೀಶ್ ಶೆಟ್ಟಿ ಸಹೋದರಿ ವಿದ್ವತ್ ಕಾಲೇಜಿನ ಉಪನ್ಯಾಸಕಿ ಶೋಭ ವಿಜಯ ಶೆಟ್ಟಿ ಹಾಗೂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲ ಗೋಪಾಲ ಇವರ ಸಮ್ಮುಖದಲ್ಲಿ ಎಲ್ಲ ಸದಸ್ಯರು ಸನ್ಮಾನಿಸಿ ಗೌರವಿಸಿದರು.












