ಬೆಳ್ತಂಗಡಿ:ಬೆಳ್ತಂಗಡಿಯ ಸುದೇಮುಗೇರು ವ್ರದ್ಧಾಶ್ರಮಕ್ಕೆ ಬೆಳ್ತಂಗಡಿ ವರ್ತಕರ ಸಂಘದಿಂದ ಎ 7ರಂದು ಭೇಡಿ ನೀಡಿದರು.
ಈಸ್ಟರ್, ಹೋಳಿ, ಮಹಾವೀರ್ ಜಯಂತಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ, ದೈನಂದಿನ ಗ್ರಹೋಪಯೋಗಿಹಾಗೂ ದಿನಸಿ ವಸ್ತುಗಳನ್ನು ನೀಡಿ ಸಂಘ ತೃಪ್ತಿಪಟ್ಟಿತು.
ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೋ ಆಶ್ರಮ ವಾಸಿಗಳನ್ನು ಉದ್ದೇಶಿಸಿ ಮಾತನಾಡಿ ವೃದ್ದಾಪ್ಯಾದಲ್ಲಿ ಮನುಷ್ಯನಿಗೆ ಹಣ ಅಂತಸ್ತಿಗಿಂತ ಹೆಚ್ಚಾಗಿ ಬೇಕಾಗಿರುವುದು ಪ್ರೀತಿ,ಗೌರವ ಮತ್ತು ಸಮಯ. ಹೆತ್ತರವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಎಂದರು.
ಆಶ್ರಮದ ಭಗಿನಿ ಎಸ್.ಆರ್ ಲೂಸಿ, ಭಗಿನಿ ಎಸ್ ಆರ್ ನೋಬಲ್, ಉಪಸ್ಥಿತರಿದ್ದು ವರ್ತಕರ, ಕೊಡುಗೆ, ಹಾಗೂ ಪ್ರೀತಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ,ವಿಲ್ಸನ್ ಗೊನ್ಸಾಲ್ವಿಸ್, ಜೂಡ್ ಲೋಬೋ, ಶೀತಲ್ ಜೈನ್, ವಿನ್ಸೆಂಟ್ ಡಿ.ಸೋಜಾ, ಶ್ರೀಮತಿ ಸೆಲಿನ್ ನೋರೂನ್ಹ, ಅರಿಹಂತ್ ಜೈನ್,ಅಶೋಕ್ ಶೆಟ್ಟಿ, ಹಿರಿಯ ಉದ್ಯಮಿ ಅಲ್ಫೋನ್ಸ್ ಫ್ರಾoಕೋ ಉಪಸ್ಥಿತರಿದ್ದರು.
ಕಾರ್ಯದರ್ಶಿ ಲ್ಯಾನ್ಸಿ ಪಿರೇರಾ ಸ್ವಾಗತಿಸಿ, ವಂದಿಸಿದರು.












