22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

ಬೆಳ್ತಂಗಡಿ:ಬೆಳ್ತಂಗಡಿಯ ಸುದೇಮುಗೇರು ವ್ರದ್ಧಾಶ್ರಮಕ್ಕೆ ಬೆಳ್ತಂಗಡಿ ವರ್ತಕರ ಸಂಘದಿಂದ ಎ 7ರಂದು ಭೇಡಿ ನೀಡಿದರು.

ಈಸ್ಟರ್, ಹೋಳಿ, ಮಹಾವೀರ್ ಜಯಂತಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ, ದೈನಂದಿನ ಗ್ರಹೋಪಯೋಗಿ‌ಹಾಗೂ ದಿನಸಿ ವಸ್ತುಗಳನ್ನು ನೀಡಿ ಸಂಘ ತೃಪ್ತಿಪಟ್ಟಿತು.

ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ‌ ರೋನಾಲ್ಡ್ ಲೋಬೋ ಆಶ್ರಮ ವಾಸಿಗಳನ್ನು ಉದ್ದೇಶಿಸಿ ಮಾತನಾಡಿ ವೃದ್ದಾಪ್ಯಾದಲ್ಲಿ ಮನುಷ್ಯನಿಗೆ ಹಣ ಅಂತಸ್ತಿಗಿಂತ ಹೆಚ್ಚಾಗಿ ಬೇಕಾಗಿರುವುದು ಪ್ರೀತಿ,ಗೌರವ ಮತ್ತು ಸಮಯ. ಹೆತ್ತರವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಎಂದರು.

ಆಶ್ರಮದ ಭಗಿನಿ ಎಸ್.ಆರ್ ಲೂಸಿ, ಭಗಿನಿ ಎಸ್ ಆರ್ ನೋಬಲ್, ಉಪಸ್ಥಿತರಿದ್ದು ವರ್ತಕರ, ಕೊಡುಗೆ, ಹಾಗೂ ಪ್ರೀತಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ,ವಿಲ್ಸನ್ ಗೊನ್ಸಾಲ್ವಿಸ್, ಜೂಡ್ ಲೋಬೋ, ಶೀತಲ್ ಜೈನ್, ವಿನ್ಸೆಂಟ್ ಡಿ.ಸೋಜಾ, ಶ್ರೀಮತಿ ಸೆಲಿನ್ ನೋರೂನ್ಹ, ಅರಿಹಂತ್ ಜೈನ್,ಅಶೋಕ್ ಶೆಟ್ಟಿ, ಹಿರಿಯ ಉದ್ಯಮಿ ಅಲ್ಫೋನ್ಸ್ ಫ್ರಾoಕೋ ಉಪಸ್ಥಿತರಿದ್ದರು.

ಕಾರ್ಯದರ್ಶಿ ಲ್ಯಾನ್ಸಿ ಪಿರೇರಾ ಸ್ವಾಗತಿಸಿ, ವಂದಿಸಿದರು.

Related posts

ಗಾಯತ್ರಿ ಮಂತ್ರವೇ ಸರ್ವಶ್ರೇಷ್ಠ

Suddi Udaya

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಅಂಗದಾನ ಜಾಗೃತಿ ಕಾರ್ಯಕ್ರಮ ‘ಧಾತ್ರು’ ಆಯೋಜನೆ

Suddi Udaya

ಪೆರುವಡಿ ನಾರಾಯಣ ಭಟ್ ನಿಧನಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಬಂದಾರು: ಪೆರ್ಲ -ಬೈಪಾಡಿ ಸ.ಹಿ.ಪ್ರಾ. ಶಾಲೆಯ ವಿವೇಕ ಕೊಠಡಿ ಉದ್ಘಾಟನೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಮಡಂತ್ಯಾರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಎಸ್‌ಎಮ್‌ಎ: ಉತ್ತಮ ಸಮುದಾಯ ಅಭಿಯಾನ ಪ್ರಯುಕ್ತ ಬೆಳ್ತಂಗಡಿಯಲ್ಲಿ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ

Suddi Udaya
error: Content is protected !!