ಬೆಳ್ತಂಗಡಿ: ಶ್ರೀಮತಿ ವಿಮಲ ಹಾಗೂ ಗೋಪಾಲ ಪೂಜಾರಿ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಸಂಭ್ರಮವು ಕುದ್ಯಾಡಿಯ ಮುದ್ರಾಜೆ ದುರ್ಗಾಂಬ ಸದನದಲ್ಲಿ ಕುಟುಂಬಸ್ಥರು, ಬಂಧು-ಮಿತ್ರರ ಸಮ್ಮುಖದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ದಂಪತಿಗಳ ಐವತ್ತು ವರ್ಷದ ವೈವಾಹಿಕ ಜೀವನದ ಸ್ಮರಣೀಯ ಕ್ಷಣಗಳನ್ನು ಸ್ಮರಿಸಿ, ಅವರ ಸೌಹಾರ್ದಯುತ ಜೀವನ, ಪರಸ್ಪರ ಪ್ರೀತಿ, ಸಹಕಾರ ಮತ್ತು ಕುಟುಂಬದ ಮೇಲಿನ ನಿಷ್ಠೆ ಎಲ್ಲರಿಗೂ ಪ್ರೇರಣೆಯಾಯಿತು. ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ಆತ್ಮೀಯರು ದಂಪತಿಗಳಿಗೆ ಹಾರೈಸಿ, ಅವರ ಮುಂದಿನ ಜೀವನವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಶುಭಕೋರಿದರು.
ಸಮಾರಂಭವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭವಾಗಿ ಮನೋರಂಜನೆ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಮೆರಗು ಪಡೆಯಿತು. ಉಪಸ್ಥಿತರಿದ್ದ ಎಲ್ಲರೂ ಈ ಸುವರ್ಣ ಸಂಭ್ರಮವನ್ನು ಸಂತೋಷಭರಿತವಾಗಿ ಅನುಭವಿಸಿ, ದಂಪತಿಗಳ ಜೀವನ ಸಾಧನೆಯನ್ನು ಕೊಂಡಾಡಿದರು.












