September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಜು ಇಂಡೇನ್ ಗ್ಯಾಸ್‌ನಿಂದ ಅಸಮರ್ಪಕ ಗ್ಯಾಸ್ ವಿತರಣೆ: ಜಿಲ್ಲಾಧಿಕಾರಿ, ಬೆಳ್ತಂಗಡಿ ಪೊಲೀಸರಿಗೆ ಗ್ರಾಹಕರಿಂದ ದೂರು.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಕಛೇರಿ ಹೊಂದಿರುವ ಇಂಡೇನ್ ಗ್ಯಾಸ್ ವಿತರಣ ಸಂಸ್ಥೆಯಾದ ಮಂಜು ಇಂಡೇನ್ ಗ್ಯಾಸ್ ಸಂಸ್ಥೆಯು ನಮಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ನೀಡದೇ ಸತಾಯಿಸುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸುವಂತೆ ಗುರುವಾಯನಕೆರೆ ನಿವಾಸಿಗಳಾದ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಹಾಗೂ ಮಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.

ಅವರ ವಿತರಣ ವ್ಯವಸ್ಥೆಯಂತೆ ತಿಂಗಳು ಕಳೆದ ಬಳಿಕ ಗ್ಯಾಸ್ ಬುಕ್ ಮಾಡಿದರೂ ಸಿಲಿಂಡರ್ ನೀಡುತ್ತಿಲ್ಲ. ಬಡವರಾದ ನಮಗೆ ಅಡುಗೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ಅವರು ಮಾಡುತ್ತಿಲ್ಲ. ಬದಲಾಗಿ ನಾವೇ ಅವರ ಕಛೇರಿಗೆ ಹೋಗಿ ಗ್ಯಾಸ್ ಬುಕ್ ಮಾಡಿ ರಶೀದಿ ಮಾಡಿದ ಬಳಿಕ ೧೦-೨೦ ದಿನಗಳ ಬಳಿಕ ಅವರ ಗೋದಾಮಿಗೆ ಹೋಗಿ ಸಿಲಿಂಡರ್ ಪಡೆಯಬೇಕಾಗಿದೆ. ಬೆಳ್ತಂಗಡಿಯಿAದ ಮದ್ದಡ್ಕ- ಪಡಂಗಡಿ ಕಡೆ ವಾಸವಿರುವ ನಾವು ಇದರಿಂದ ಗ್ಯಾಸ್ ಸಿಲಿಂಡರ್ ಪಡೆಯಲು ಬಹುದೂರ ಹೋಗಬೇಕಾಗಿದೆ. ಒಂದೊಮ್ಮೆ ಅಲ್ಲಿಗೆ ಹೋದರೂ ಮತ್ತೊಂದು ದಿನ ಬನ್ನಿ ಎಂದು ಸಾಗ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಹೆಚ್ಚುವರಿ ಸಿಲಿಂಡರ್ ಪಡೆಯಲು ಅರ್ಜಿ ನೀಡಿದರೂ ಸಿಲಿಂಡರ್ ನೀಡದೇ ಸತಾಯಿಸುತ್ತಾರೆ. ಹೆಚ್ಚುವರಿ ಹಣ ಕಟ್ಟಿದರಷ್ಟೇ ಸಿಲಿಂಡರ್ ಪಡೆಯಬಹುದಾಗಿದೆ. ಹೆಸರು ಬದಲಾವಣೆಗೂ ಹೆಚ್ಚುವರಿ ಹಣ ತೆರಬೇಕಾಗಿದೆ. ಇಂತಹ ಅವ್ಯವಸ್ಥೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದೇವೆ.

ಆದುದರಿಂದ ನಮಗೆ ಮನೆ ಬಳಕೆಯ ಸಮರ್ಪಕವಾದ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಕುಕ್ಕೆ ಕುಮಾರಧಾರ ಸ್ಥಾನಗಟ್ಟ ನದಿಯಲ್ಲಿ ಸ್ವಚ್ಛತಾ ಕಾರ್ಯ

Suddi Udaya

ನಿಡ್ಲೆ : ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಕಾರ್ಯಕ್ರಮ: ಪುತ್ತೂರಿನ ಅರುಣ್ ಪುತ್ತಿಲ , ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕೊಯ್ಯೂರುನಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ: 5 ದಿನವಾದರೂ ದುರಸ್ತಿಯಾಗದ ವಿದ್ಯುತ್ ಕಂಬ

Suddi Udaya

ಬೆಳ್ತಂಗಡಿ ವಲಯದ ಬೆಳ್ತಂಗಡಿ ಪ್ರಗತಿ-ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

Suddi Udaya
error: Content is protected !!