July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಮಳೆಗಾಲದ ವಿಪತ್ತು ಎದುರಿಸಲು ತಂಡ ರಚನೆ

bಬೆಳ್ತಂಗಡಿ: ಮಳೆಗಾಲದಲ್ಲಿ ಸಂಭವಿಸುವ ವಿಪತ್ತುಗಳಿಂದ ವಿದ್ಯುತ್ ಕಡಿತದ ಸಮಸ್ಯೆ ಕಡಿಮೆ ಮಾಡಲು ಲೈನ್‌ ಮ್ಯಾನ್‌ಗಳ ಜೊತೆ ಸಿಬ್ಬಂದಿ ನೇಮಿಸಲಾಗಿದ್ದು, ಆಯಾ ವಿಭಾಗಕ್ಕೆ ಎಇಇ ಉಸ್ತುವಾರಿಯಲ್ಲಿ ಐವರ ತಂಡ ಕಾರ್ಯಾಚರಿಸಲಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾ‌ರ್ ಹೇಳಿದರು.

ಬಿಜೈಯ ಮೆಸ್ಕಾಂ ಕಚೇರಿಯಲ್ಲಿ ಎ.15ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ತಂಡವನ್ನು ಈಗಾಗಲೇ ರಚಿಸಲಾಗಿದ್ದು, ಅವರಿಗೆ ಒಂದು ವಾಹನವನ್ನೂ ಒದಗಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಅವರ ಕಾರ್ಯಾಚರಣೆ ನಡೆಯುತ್ತಿರುತ್ತವೆ. ಟ್ರಾನ್ಸ್ ಫಾರ್ಮರ್ ದುರಸ್ತಿ, ಮರ, ಗೆಲ್ಲುಗಳು ಬಿದ್ದು ತಂತಿ, ಕಂಬಗಳಿಗೆ ಹಾನಿಯಾದರೆ ತುರ್ತಾಗಿ ಸರಿಪಡಿಸುವುದು ತಂಡದ ಕೆಲಸವಾಗಿರುತ್ತದೆ. 63 ಸಬ್ ಡಿವಿಷನ್‌ ನ 245 ವಿಭಾಗಗಳಲ್ಲಿ ತಂಡ ರಚನೆಯಾಗಿದೆ. ತಿಂಗಳಿಗೆ 2 ಕೋಟಿ ರೂ. ಹೆಚ್ಚುವರಿ ಖರ್ಚು ಬರಲಿದೆ. ಆದರೆ ಜನರಿಗೆ ಸೇವೆ ಸಿಗಲಿದೆ ಎಂದರು.

ಲೈನ್‌ಮ್ಯಾನ್‌ಗಳ ನೇಮಕ: ಮೆಸ್ಕಾಂಗೆ ನೂತನವಾಗಿ 465 ಮಂದಿ ಲೈನ್ ಮನ್‌ಗಳ ನೇಮಕ ಮಾಡಲಾಗುತ್ತಿದೆ. 9,248 ಲೈನ್‌ಮ್ಯಾನ್‌ ಹುದ್ದೆಗಳ ಪೈಕಿ 5,283 ಹುದ್ದೆ ಭರ್ತಿಯಾಗಿದೆ. ಉಳಿದ 4145 ಮಂದಿಯನ್ನು ಇನ್ನು ನೇಮಕ ಮಾಡಬೇಕಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲೂ ಇ-ಚಾರ್ಜಿಂಗ್ ಸೆಂಟರ್ ಅಳವಡಿಸುವ ಬಗ್ಗೆ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಶೀಘ್ರವಾಗಿ ಕೆಲಸ ನಡೆಸಲಾಗುವುದು ಎಂದು ಹರೀಶ್ ಕುಮಾರ್ ಹೇಳಿದರು.

Related posts

ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

Suddi Udaya

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ಕೊರಗಪ್ಪ ಟಿ.ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಪಣಕಜೆ ಶ್ರೀಕೃಷ್ಣ ಭಜನಾ ಮಂದಿರದ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ, ಪ್ರ. ಕಾರ್ಯದರ್ಶಿಯಾಗಿ ಸುಜೀತ್ ಕುಮಾರ್

Suddi Udaya

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya
error: Content is protected !!