ಸೊಣಂದೂರು: ಶ್ರೀಕೃಷ್ಣ ಭಜನಾ ಮಂದಿರ ಪಣಕಜೆ ಇದರ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಮುಂಡಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ 2026-2028 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುಜೀತ್ ಕುಮಾರ್, ಕೋಶಾಧಿಕಾರಿಯಾಗಿ ಸುದೀಪ್ ಕುಲಾಲ್ ಆಯ್ಕೆಗೊಂಡರು.
ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಶೆಟ್ಟಿ ಅಂಬೆಟ್ಟು, ಉಪಾಧ್ಯಕ್ಷರಾಗಿ ಪದ್ಮ ಮೂಲ್ಯ ಬಾಕಿಮಾರು, ಜತೆ ಕಾರ್ಯದರ್ಶಿಯಾಗಿ ಶಿವರಾಯ ಪ್ರಭು ಆಟ್ಲ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀಕಾಂತ್ ಶೆಟ್ಟಿ ಮುಂಡಾಡಿ, ಹರೀಶ್ ಪ್ರಭು ಮುಂಡಾಡಿ, ಯಶೋಧರ ಶೆಟ್ಟಿ ಅರ್ಕಜೆ, ಹರೀಶ್ ಕೆ ಪಣಕಜೆ, ಸಂಪತ್ ಶೆಟ್ಟಿ ಶ್ರೀಕೃಷ್ಣ ನಗರ, ಶ್ರೀಮತಿ ಅಶ್ವಿನಿ ನಾಯಕ್ ಪಣಕಜೆ, ಶ್ರೀಮತಿ ಜ್ಯೋತಿ ಪ್ರಭು ಆಟ್ಲ, ಅಭಿಲಾಷ್ ಆಚಾರ್ಯ ಪಮ್ಮಾಜೆ, ಸತೀಶ್ ಆಚಾರ್ಯ ಶ್ರೀಕೃಷ್ಣ ನಗರ. ಇವರನ್ನು ಆಯ್ಕೆ ಮಾಡಲಾಯಿತು.















