ಬೆಳ್ತಂಗಡಿ: 1978ರಲ್ಲಿ ಪ್ರಾರಂಭವಾದ ಒಕ್ಕಲಿಗ ಸಮುದಾಯದ ಹಿರಿಯ ಸಂಘಗಳಲ್ಲಿ ಒಂದಾದ ಜಿಲ್ಲೆಯ ಮಂಗಳೂರಿನ ಒಕ್ಕಲಿಗ ಗೌಡ ಸೇವಾ ಸಂಘದ 48 ವರ್ಷ ತುಂಬಿದ್ದು, ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 2026-29ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು, ಉಪಾಧ್ಯಕ್ಷರಾಗಿ ಆನಂದ ಗೌಡ ಪಿ.ಎಚ್. ಮತ್ತು ಕಾರ್ಯದರ್ಶಿಯಾಗಿ ನವೀನಚಂದ್ರ ಗೌಡ ಭೋಜಾರ, ಜತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೆ.ವಿ., ಖಜಾಂಚಿಯಾಗಿ ಜಯಶ್ರೀ ಪಿ. ಆಯ್ಕೆಯಾದರು.
ಸದಸ್ಯರಾಗಿ ಕೃಷ್ಣಪ್ಪ ಗೌಡ, ಗುರುದೇವ ಯು.ಬಿ., ಚಂದ್ರಶೇಖರ ಅಗರಿ, ರಾಮಚಂದ್ರ ಕೆ., ಕಲಾವತಿ, ಜಯರಾಮ ಗೌಡ, ಪದ್ಮನಾಭ, ನಾಗೇಶ್ ಗೌಡ, ಪ್ರಜ್ಞಾ ಕಾಪಿನಡ್ಕ, ಮಂಜುಪ್ರಸಾದ್ ಕುರುಂಜಿ, ರಕ್ಷಿತ್ ಪುತ್ತಿಲ, ಕಿರಣ್ ಕೆ., ಪೂರ್ಣಿಮ ಕೆ.ಎಂ., ಅನಿತಾ ಎಸ್., ಸಾರಿಕಾ ಸುರೇಶ್, ಸೌಮ್ಯ ಸುರೇಶ್ ಆಯ್ಕೆಯಾದರು.












