ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಲ್ಮತ್ ಸಂಸ್ಕೃತದಲ್ಲಿ 99 ಅಂಕ ಪಡೆದು ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ. ಇವರು 514 ಅಂಕಗಳೊಂದಿಗೆ ಕಲಾ ವಿಷಯಗಳಲ್ಲಿಯೂ ವಿಶೇಷ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾರೆ.
ಇವರು ಕೂಟದಕಲ್ಲು ಮೊಹಮ್ಮದ್ ಶರೀಫ್ ಹಾಗೂ ತ್ವಾಹಿರಾ ದಂಪತಿ ಪುತ್ರಿ. ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಪ್ರಮೋದ್ ಕುಮಾರ್ ಇವರನ್ನು ಅಭಿನಂದಿಸಿದ್ದಾರೆ.












