25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಝೇಂಕಾರ ಬೇಸಿಗೆ ಶಿಬಿರ ಉದ್ಘಾಟನೆ

ಬೆಳ್ತಂಗಡಿ : ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸಹಭಾಗಿತ್ವದೊಂದಿಗೆ ಪಿಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ನೇರವೇರಿತು.

ಜೇಸಿರೆಟ್ ಪೂರ್ವ ಅಧ್ಯಕ್ಷರಾದ ಶಿಕ್ಷಕಿ ಅನುರಾಧ ಸುಭಾಷ್ ಚಂದ್ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೇರಣಾತ್ಮಕ ಮಾತುಗಳ ಮೂಲಕ ಸ್ಪೂರ್ತಿ ತುಂಬಿದರು ನಮ್ಮಲ್ಲಿರುವ ಸಕಾರಾತ್ಮಕ ಚಿಂತನೆ ಪ್ರೀತಿ ಭಾಂದವ್ಯಗಳ ಮೂಲಕ ಸಮಾಜದಲ್ಲಿ ಒಳ್ಳೆಯ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದ ಅವರು ಬೇಸಿಗೆ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ವೇದಿ ಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವೃತ್ತಿಯಲ್ಲಿ ಶಿಕ್ಷಕರು ಹಾಗೂ ಕಲಾವಿದರಾದ ತೇಜಸ್ವಿ ಅಂಬೆಕಲ್ಲು ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸಕರಾತ್ಮಕ ಚಿಂತನೆ ತುಂಬಿದಾಗ ಅದು ಅವರ ಜೀವನದ ಯಶಸ್ವಿಗೆ ಬುನಾದಿ ಯಾಗುತ್ತದೆ ಎಂದು ಹೇಳಿದ ಅವರು ಜೆಸಿಐ ಘಟಕದ ಚಟುವಟಿಕೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಘಟಕಾಧ್ಯಕ್ಷ ಜಿತೇಶ್ ಕುಮಾರ್ ವಹಿಸಿದ್ದು ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು. ಜೆಜೆಸಿ ಅಧ್ಯಕ್ಷ ತೇಜಸ್ ಉಪಸ್ಥಿತರಿದ್ದರು. ಜೇಸಿರೆಟ್ ಪೂರ್ವಾಧ್ಯಕ್ಷೆ ನಮಿತಾ ನಿರ್ಮಲ್ ಕುಮಾರ್ ರವರು ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು.

ನವ್ಯರವರು ಉದ್ಘಾಟಕರ ಪರಿಚಯ ಮಾಡಿದರು.ವೈಷ್ಣವಿ ಭಟ್ ರವರ ಜೆಸಿ ವಾಣಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕರಾದ ಜೆಸಿ ಹೇಮಾವತಿ ಕೆ ಇವರು ಶಿಬಿರದ ರೂಪುರೇಷೆಯನ್ನು ವಿವರಿಸಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಜೆಸಿ ಪೂರ್ವ ಅಧ್ಯಕ್ಷರಾದ ಸುಭಾಶ್ಚಂದ್ರ ಎಂ ಪಿ ಚಿದಾನಂದ ಇಡ್ಯಾ,ನಾರಾಯಣಶೆಟ್ಟಿ ಪೂರ್ವಾಧ್ಯಕ್ಷೆಯರಾದ ಪವಿತ್ರ ಚಿದಾನಂದ್, ದೀಪ ಕಿರಣ್ ಹಾಗೂ ಶಿಬಿರಾರ್ಥಿಗಳ ಪೋಷಕ ಬಂಧುಗಳು,ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Related posts

ನಿಡಿಗಲ್: ನಡ್ವಾಲ್ ಸಿರಿಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ: ಶಿಬಾಜೆಯ ಸಂಪ್ರೀತಾ ಎಸ್. ಶೆಟ್ಟಿಗಾರ್‌ ರವರ “ಅಂತರಾಳದ ಧ್ವನಿ” ಕವನ ಸಂಕಲನ ಬಿಡುಗಡೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಿಂದ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನ

Suddi Udaya

ಬೆಂಗಳೂರಿನ ಪ್ರಸಿದ್ದ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ಕುವೆಟ್ಟು ಗ್ರಾಮದ ಆಲಂದಿಲ ಮನೆಯ ಜನಾರ್ದನ ಸಾಲ್ಯಾನ್ ನಿಧನ

Suddi Udaya
error: Content is protected !!