ಬೆಳ್ತಂಗಡಿ: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (ಸಿಸಿಆರ್ಟಿ) ನೀಡುವ ೨೦೨೫-೨೬ನೇ ಸಾಲಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿವೇತನ (ಸಿಟಿಎಸ್ಎಸ್)ಕ್ಕೆ ಬೆಳ್ತಂಗಡಿ ಅಂಡಿಂಜೆ ನಿವಾಸಿ, ಶಿವಮೊಗ್ಗದ ಗೀತ ನೃತ್ಯ ಕಲಾ ಕುಟೀರದ ವಿದ್ಯಾರ್ಥಿನಿ ಸಾನ್ವಿ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಈ ವರ್ಷ ಆಯ್ಕೆಯಾದ 634 ವಿದ್ಯಾರ್ಥಿಗಳಲ್ಲಿ ಸಾನ್ವಿ ಸಾಲಿಯಾನ್ ಒಬ್ಬಳಾಗಿದ್ದು, ಭರತನಾಟ್ಯದಲ್ಲಿ ವಿಶೇಷ ತರಬೇತಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಶಿವಮೊಗ್ಗದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಇವರು ಪ್ರಸ್ತುತ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾಗಿರುವ ಅಂಡಿಂಜೆ ‘ವನಸಿರಿ’ಯ ಡಾ. ಸತೀಶ್ ಕುಮಾರ್ ಅಂಡಿಂಜೆ ಮತ್ತು ವಿನಯಾ ದಂಪತಿ ಪುತ್ರಿ.












