ಕೊಯ್ಯೂರು: ಇಲ್ಲಿಯ ಕೋರಿಯಾರು ಬಳಿ ವಾತ್ಸಲ್ಯ ಮನೆಯ ಗೋಪಾಲಕೃಷ್ಣ ಶರ್ಮ (64ವ) ರವರು ಅನಾರೋಗ್ಯದಿಂದ ಎ.24ರಂದು ನಿಧನರಾದರು.
ಇವರು ಪ್ರತಿನಿಧಿಗಳ ಸಹಕಾರ ಸಂಘದ ಹಿರಿಯ ಸದಸ್ಯ, ಭಾರತೀಯ ಜೀವವಿಮಾ ನಿಗಮದ ಬಂಟ್ವಾಳ ಶಾಖೆಯ ಪ್ರತಿನಿಧಿಯಾಗಿದ್ದರು.
ಮೃತರು ಪತ್ನಿ ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಈಶ್ವರಿ, ಪುತ್ರರಾದ ಸುಶಾಂತ್, ಶುಶ್ರುತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.













