40.8 C
ಪುತ್ತೂರು, ಬೆಳ್ತಂಗಡಿ
April 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀರಾಮ ಕ್ಷೇತ್ರ ಕನ್ಯಾಡಿಯ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇಮಕ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ, ಬೆಳ್ತಂಗಡಿ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರು, ಅಯೋಧ್ಯೆಯಲ್ಲಿ ಈಗಾಗಲೇ ಜಾಗವನ್ನು ಖರೀದಿ ಮಾಡಿ ಶಾಖಾ ಮಠದ ನಿರ್ಮಾಣದ ಕೈಕಂರ್ಯವನ್ನು ಪ್ರಾರಂಭಿಸಿದ್ದಾರೆ.

ಈ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ನೇಮಕಗೊಳಿಸಲಾಗಿದೆ ಎಂದು ಕ‌ನ್ಯಾಡಿ ಶ್ರೀಗಳು ಘೋಷಣೆ ಮಾಡಿದರು.

ಮೂರು ಬಾರಿ ಸತತ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ, ಒಬ್ಬ ನಿಷ್ಕಳಂಕ, ನಿಷ್ಠಾವಂತ, ಆದರ್ಶ, ಸಜ್ಜನ ರಾಜಕಾರಣಿಯಾಗಿ ಜನಮನ್ನಣೆಯನ್ನು ಗಳಿಸಿರುತ್ತಾರೆ.ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡಿ ಸಂಘಟನೆಯ ಒಬ್ಬ ಉತ್ತಮ ನಾಯಕನೆಂಬ ಕೀರ್ತಿಗೆ ಪಾತ್ರರಾಗಿರುತ್ತಾರೆ. ತಾನೊಬ್ಬ ರಾಜಕಾರಣಿಗಿಂತ ಹೆಚ್ಚಾಗಿ ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಅದರ ಅಭ್ಯುದಯಕ್ಕಾಗಿ ಸುಮಾರು 150ಕ್ಕೂ ಮಿಕ್ಕಿ ಬ್ರಹ್ಮ ಕಲಶಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಇಡೀ ರಾಜ್ಯದ ಜನತೆಯ ಅಮೋಘ ಪ್ರೀತಿಗೆ ಭಾಜನರಾದ ಒಬ್ಬ ಶುದ್ಧ ಹಸ್ತದ ದೈವ ಭಕ್ತ. ಜನನಾಯಕರಾಗಿರುವ ನಳಿನ್ ಕುಮಾರ್ ರವರು ಶ್ರೀ ಮಠದ ಪರಮಾಪ್ತ ಶಿಷ್ಯರಾಗಿದ್ರೂ, ಈಗ ಅಯೋಧ್ಯೆಯ ಎಲ್ಲಾ ಯುವ ಶಾಖಾ ಮಠಕ್ಕೆ ರಾಷ್ಟ್ರ- ಅಂತರಾಷ್ಟ್ರ ಮಟ್ಟದಲ್ಲಿ ಶಿಷ್ಯರನ್ನು ಹೊಂದಿರುವ ಈ ಪರಮ ಪವಿತ್ರವಾದ ದೈವೀ ಸಾನಿಧ್ಯವನ್ನು ಹೊಂದಿರುವ ಸಂಸ್ಥೆಗೆ ನಳಿನ್ ಕುಮಾರ್ ಕಟೀಲ್ ರವರು ಸರ್ವಸಮರ್ಥರೆಂದು ಮನಗಂಡು ಈ ಶ್ರೇಷ್ಠಕಾರ್ಯಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದರು.

ಈ ಸಂದರ್ಭದಲ್ಲಿ ಗುರುದೇವ ಮಠ ಟ್ರಸ್ಟ್, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಟ್ರಸ್ಟ್, ಶ್ರೀ ರಾಮಕ್ಷೇತ್ರ ಅಭಿವೃದ್ಧಿ ಸಮಿತಿ ಪ್ರಮುಖರಾದ ಪೀತಾಂಬರ ಹೇರಾಜೆ ಬೆಳ್ತಂಗಡಿ,ನಾಗೇಶ್ ಗೌಡ ಕೊಕ್ಕಡ, ಜಯಂತ್ ಕೋಟ್ಯಾನ್ ಮರೋಡಿ,ಸಂಪತ್ ಬಿ ಸುವರ್ಣ ಬೆಳ್ತಂಗಡಿ, ರಾಜೇಶ್ ಪೈ ಉಜಿರೆ,ತಿಮ್ಮಪ್ಪ ಗೌಡ ಬೆಳಾಲು,ರವೀಂದ್ರ ಪೂಜಾರಿ ಆರ್ಲ ಕನ್ಯಾಡಿ,ಕೃಷ್ಣಪ್ಪ ಗುಡಿಗಾರ್,ವಿಕಾಸ್ ಪುತ್ತೂರು,ಶಿವಕಾಂತ್ ಗೌಡ,ರತ್ನಾಕರ ಬುಣ್ಣನ್ ಮರೋಡಿ,ರಾಜೇಶ್ ಪೂಜಾರಿ ವೇಣೂರು,ಸುನೀಲ್ ಕನ್ಯಾಡಿ,ಕೇಶವ ಬಂಗೇರ ಕಳಿಯ, ಹರೀಶ್ ಕನ್ಯಾಡಿ,ಯತೀಶ್ ಕನ್ಯಾಡಿ,ವಿನೋಭಾ ಕಾರಂತ್ ಉಜಿರೆ,ಪುರುಷೋತ್ತಮ ಪೂಜಾರಿ,ತುಕರಾಮ್ ಸಾಲಿಯಾನ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ವಿವೇಕ ಜಾಗ್ರತ ಬಳಗದ ವತಿಯಿಂದ ಆದ್ಯಾತ್ಮಿಕ ಚಿಂತನ ವಿಚಾರ ಕಾರ್ಯಕ್ರಮ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್‌ಗೆ ಸನ್ಮಾನ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ಮಾಜಿ ಶಾಸಕ ದಿ| ಕೆ ವಸಂತ ಬಂಗೇರ ರವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕುವೆಟ್ಟು ಗ್ರಾ.ಪಂ. ಗೆ ಮನವಿ

Suddi Udaya

ವಿಶ್ವ ತಂಬಾಕು ರಹಿತ ದಿನ :ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕರಿಂದ ಜಾಗೃತಿ ಜಾಥಾ 

Suddi Udaya
error: Content is protected !!