ಬೆಳ್ತಂಗಡಿ: 2025-26ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 618 ಅಂಕ ಪಡೆದು ರಾಜ್ಯದಲ್ಲಿ 8ನೇ ಸ್ಥಾನ ಗಳಿಸಿರುವ ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಕೌಶಿಕ್ ಶೆಟ್ಟಿ ರವರನ್ನು ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಎ.26ರಂದು ಸನ್ಮಾನಿಸಲಾಯಿತು. ಮಚ್ಚಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಶೆಟ್ಟಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ನಿವಾಸಿ ಚಿದಾನಂದ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ಇವರ ಪುತ್ರ.
ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಹನೀಫ್ ವರ್ಷಾ, ಕೋಶಾಧಿಕಾರಿ ರಿಜ್ವಾನ್ ಬಿಕೆ, ಸಮಿತಿ ಸದಸ್ಯರಾದ ರಶೀದ್ ಬೆಳ್ತಂಗಡಿ, ಶರೀಫ್ ವೆಲ್ಕಮ್, ಇಸ್ಮಾಯಿಲ್ ಸಂಜಯ ನಗರ, ಶರೀಫ್ ಸಂಜಯನಗರ ಉಪಸ್ಥಿತರಿದ್ದರು.













