ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ಬದಿಗೆ ಸ್ಥಳಾಂತರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ವಾಣಿ ಶಾಲೆ, ಚರ್ಚ್ ರಸ್ತೆ, ರೆಂಕೆದಗುತ್ತು, ಸಂತೆಕಟ್ಟೆ, ಜ್ಯೂನಿಯರ್ ಕಾಲೇಜು, ಬೆಳ್ತಂಗಡಿ ಪೇಟೆ, ಸುಧೆಮುಗೇರು, ಲಾಯಿಲ, ಕಾಶಿಬೆಟ್ಟು, ನಡ, ನಾವೂರು, ಇಂದಬೆಟ್ಟು ಹಾಗೂ ಕೊಲ್ಲಿ ಪರಿಸರಗಳಲ್ಲಿ ಎ.28 ಮಂಗಳವಾರ ಮತ್ತುಎ.30ಗುರುವಾರದಂದು ಬೆಳಿಗ್ಗೆ ಗಂಟೆ:10.00ರಿಂದ ಸಂಜೆ ಗಂಟೆ:5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ‘ಕಾರ್ಯ ಮತ್ತು ಪಾಲನಾ ಉಪವಿಭಾಗ ಬೆಳ್ತಂಗಡಿ ತಿಳಿಸಿದ್ದಾರೆ.







