ಮುಂಡಾಜೆ: ಕೀರ್ತನಾ ಕಲಾತಂಡದ ಸಕ್ರಿಯ ಸದಸ್ಯರಾಗಿದ್ದು, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ರಶ್ಮಿತಾ ಮತ್ತು ನಿಶ್ಮಿತಾ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಶ್ಮಿತಾ ಮತ್ತು ಅನ್ವಿತಾ ಅವರನ್ನು ತಂಡದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಧು ಶೆಟ್ಟಿ ಹುರ್ತಾಜೆ, ಪುರುಷೋತ್ತಮ ಶೆಟ್ಟಿ ಅಗರಿ, ಬಾಬು ಪೂಜಾರಿ ಕೂಳೂರು, ಗಣೇಶ್ ಬಂಗೇರ ಕೂಳೂರು ಉಪಸ್ಥಿತರಿದ್ದರು. ತಂಡದ ಪದಾಧಿಕಾರಿಗಳು, ಸದಸ್ಯರು ಹಾಗೂ ಸನ್ಮಾನಿತರ ಹೆತ್ತವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.













