August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಧರ್ಮಸ್ಥಳ: ಯುಗಾದಿ ಬಳಗದ ಸ್ನೇಹ ಪರ್ವ-2 ಕಾರ್ಯಕ್ರಮ

ಧರ್ಮಸ್ಥಳ : ಫೇಸ್ಬುಕ್ ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ -2 ಕಾರ್ಯಕ್ರಮ ಎ.26ರಂದು ಧರ್ಮಸ್ಥಳ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ಭುಜಬಲಿ ಧರ್ಮಸ್ಥಳ ವಹಿಸಿದ್ದರು. ಉದ್ಘಾಟನೆಯನ್ನು ಯುಗಾದಿ ಬಳಗದ ವ್ಯವಸ್ಥಾಪಕರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕೊಪ್ಪದ ಶಶಿಧರ್ ಎಲ್ಎಸ್ ಕೊಪ್ಪ, ತೀರ್ಥಹಳ್ಳಿಯ ಸತ್ಯಶೋಧ ಪತ್ರಿಕೆ ಸಂಪಾದಕ ಅರುಣ್ ಮಂಜುನಾಥ್, ಬೆಂಗಳೂರಿನ ಮಂಜುಳಾ ಪ್ರಸಾದ್ ಹಾಗೂ ರಾಜೇಶ್ವರಿ ಉಮೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯುಗಾದಿ ಬಳಗದ ಹಿರಿಯರಿಗೆ ಯುಗಾದಿ ಮಾಣಿಕ್ಯ ಹಾಗೂ ಸಕ್ರಿಯ ಸದಸ್ಯರಿಗೆ ಯುಗಾದಿ ಐಸಿರಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಯುಗಾದಿ ಸುಜ್ಞಾನ ಸಿರಿ ಮತ್ತು ಪ್ರತಿಭಾ ಸಿರಿ ಗೌರವವನ್ನು ನೀಡಲಾಯಿತು.

ಯಲ್ಲಾಪುರದ ಶೈಲಾ ಭಟ್ ಸ್ವಾಗತಿಸಿ, ಹೊನ್ನಾವರದ ಶ್ರೀನಾಥ್ ಪಿ. ಎಸ್ ಪ್ರಸ್ತಾವಿಸಿದರು. ಬೆಂಗಳೂರಿನ ಶೀಲತಾ ಭಾರ್ಗವ್ ಮತ್ತು ಉಜಿರೆಯ ಆಶಾ ಅಡೂರ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನ ಸುಜಾತ ಭಟ್ ವಂದಿಸಿದರು. ಅಕ್ಷತಾ ಅಡೂರ್ ಪ್ರಾರ್ಥನೆ ಹಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿಯ ವೀಣಾ ಉಮೇಶ್, ಆಮಂತ್ರಣದ ವಿಜಯಕುಮಾರ್ ಜೈನ್ ಹಾಗೂ ಅರುಣ್ ಜೈನ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹ ಪರ್ವ -2 ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ, ಯಶಸ್ವಿಗೆ ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟ ನಿರ್ದೇಶಕ ಎಚ್. ಪ್ರಭಾಕರ ಮನವಿ

Suddi Udaya

ಯೂಟ್ಯೂಬರ್ ಗಳ ಮೇಲೆ ಹಲ್ಲೆ ಖಂಡಿಸಿ ಎಸ್.ಡಿ.ಪಿ.ಐ.ಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಮೆಡಿಕಲ್ ಕ್ಯಾಂಪ್

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

Suddi Udaya

ಭಾರತೀಯ ನೌಕಾಪಡೆಗೆ ಬಾರ್ಯದ ಅಜಯ್ ಜೋಹಾನ್ ಬ್ರಾಗ್ಸ್, ಆಯ್ಕೆ: ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ: ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

Suddi Udaya
error: Content is protected !!