ಬೆಳ್ತಂಗಡಿ: ಚಾರ್ಮಾಡಿ ಪುಂಜಾಲಕಟ್ಟೆ ರಾಷ್ಟಿçÃಯ ಹೆದ್ದಾರಿಯ ಬೆಳ್ತಂಗಡಿಯಿAದ ಗುರುವಾಯನಕೆರೆ ತನಕ ಎ.೨೯ರಂದು ಬೆಳಗ್ಗಿನಿಂದ ಸಂಜೆ ತನಕ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಒಂದು ಕಡೆ ಬೆಳ್ತಂಗಡಿ ನಗರದಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ಸಂತೆಕಟ್ಟೆ ಬಳಿ ಏಕಮುಖ ಸಂಚಾರ ವಾದರೆ, ಇನ್ನೊಂದೆಡೆ ಎಲ್ಲೆಡೆ ಮದುವೆ, ಗೃಹಪ್ರವೇಶ ಇನ್ನಿತರ ಕಾರ್ಯಕ್ರಮಗಳಿಂದಾಗಿ ರಸ್ತೆಗಳಲ್ಲಿ ವಾಹನಗಳ ಓಡಾಟ ಅಧಿಕವಾಗಿತ್ತು. ಇದರಿಂದಾಗಿ ಬೆಳ್ತಂಗಡಿಯಿAದ ಗುರುವಾಯನಕೆರೆ ತನಕ ಭಾರೀ ವಾಹನ ಟ್ರಾಫಿಕ್ ಬೆಳಗ್ಗೆಯಿಂದಲೇ ಆರಂಭಗೊAಡಿತ್ತು. ಮಧ್ಯಾಹ್ನ ವೇಳೆಯಂತೂ ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ಬರಬೇಕಾದರೆ ತಾಸುಗಟ್ಟಲೆ ವಾಹನದಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಾಯಿತು. ವಾಹನ ಸವಾರರು, ಪ್ರಯಾಣಿಕರು ಗಂಟೆಗಟ್ಟಲೆ ಟ್ರಾಫಿಕ್ಜಾಮ್ನಲ್ಲಿ ಸಿಲುಕಿ ಒದ್ದಾಡುವಂತಾಯಿತು. ವಿಪರೀತ ಬಿಸಿಲಿನಿಂದಾಗಿ ವಾಹನದಲ್ಲಿದ್ದವರು ಒದ್ದಾಟ ನಡೆಸುತ್ತಿರುವುದು ಕಂಡು ಬಂದಿತ್ತು.













