ನಾಲ್ಕೂರು: ಉಡುಪಿ ಪಾಂಗಳ ಗುಡ್ಡೆ ಗರಡಿ ಮನೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ರೋಹಿಣಿ ಪದ್ಮನಾಭ ಸುವರ್ಣ (75ವ)ರವರು ಮೇ 1ರಂದು ಅಲ್ಪಕಾಲದ ಅಸೌಖ್ಯದಿಂದ ನಾಲ್ಕೂರು ಗ್ರಾಮದ ಐತನಡ್ಕ ಮಜಲು ಮನೆಯಲ್ಲಿ ನಿಧನರಾದರು.
ಮೃತರು ಮಕ್ಕಳಾದ ಬಳಂಜ ಆಂಗ್ಲ ಮಾಧ್ಯಮ ಶಾಲೆಯ ಗೌರವ ಶಿಕ್ಷಕಿ ಹೇಮಲತಾ ಸುವರ್ಣ, ಪೂರ್ಣಿಮಾ ಗಂಗಾಧರ್, ಹರಿಶ್ಚಂದ್ರ ಸುವರ್ಣ, ಸೊಸೆ , ಅಳಿಯಂದಿರನ್ನು , ಮೊಮ್ಮಕ್ಕಳನ್ನು, ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.














