25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಗೇರುಕಟ್ಟೆ: ಎಂ. ವಿ ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರದ ಸಮಾರೋಪವು ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು .

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 37 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಏಪ್ರಿಲ್ 30 ರಂದು ನಿವೃತ್ತರಾದ ಶ್ರೀಮತಿ ಗುಣರತ್ನ ಕಾವೂರು ಇವರನ್ನು ಶಿಬಿರದಲ್ಲಿಗೌರವಿಸಲಾಯಿತು.

ಮುಖ್ಯಅತಿಥಿ ಯೋಗಪಟು ಸತೀಶ್ ಭಂಡಾರಿ ಒಂದು ಸಣ್ಣ ಪ್ರಯತ್ನವು ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂಬುದಕ್ಕೆ ಈ ಶಿಬಿರವು ಸಾಕ್ಷಿಯಾಗಿದೆ ಎಂದರು. ಪೋಷಕ ಹರೀಶ್ ಆಚಾರ್ಯ ಕಣಿಯೂರು ,ರೇವತಿಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸದಸ್ಯರಾದ ಪ್ರಭಾಕರ ಆಚಾರ್ಯ,ರಾಜೇಶ ಆಚಾರ್ಯ, ಹರೀಶ ಆಚಾರ್ಯ, ರಂಜೀತ್ ಮೂಡಬಿದಿರೆ,ವಸಂತ ಆಚಾರ್ಯ ಉಪಸ್ಥಿತರಿದ್ದರು.

ಶಿಬಿರದಲ್ಲಿ ಪೇಪರ್ ಕ್ರಾಫ್ಟ್ ಪ್ರಾತ್ಯಕ್ಷಿಕೆಯನ್ನು ಶರ್ಮಿಳಾ ರಾಜೇಶ್ ಮಂಗಳೂರು, ಗೀತ ಗಾಯನ ಮತ್ತು ಒಗಟುಗಳ ಬಗ್ಗೆ ರೇವತಿ ಮೇಗರವಳ್ಳಿ, ಯೋಗದ ಪ್ರಾಥಮಿಕ ಮಾಹಿತಿ ಬಗ್ಗೆ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ.ಯಲ್,ಮಹಾಭಾರತ ರಸಪ್ರಶ್ನೆ , ದೇಸೀಯ ಆಟ, ಕಸದಿಂದ ರಸ , ಹೂಗುಚ್ಚ ತಯಾರಿ ಮೊದಲಾದ ಚಟುವಟಿಕೆಗಳನ್ನು ಪ್ರೇಶೀತ ,ವಾಣಿ , ಗೀತಾ.ಡಿ , ಸ್ವಾತಿ ಮೂಡಬಿದಿರೆ,ಇಶಾನ್ ನಡೆಸಿಕೊಟ್ಟರು ಮನೆ ಬಳಕೆಯ ಪುರಾತನ ವಸ್ತುಗಳು , ವಿವಿಧ ದೇಶದ ನೋಟುಗಳು ಮತ್ತು ನಾಣ್ಯಗಳ ಪ್ರದರ್ಶನ , ಸ್ಮರಣಶಕ್ತಿ ಪರೀಕ್ಷೆ, ಶಿಬಿರಾರ್ಥಿಗಳಿಂದ ವೈಯಕ್ತಿಕ ಪ್ರತಿಭಾ ಪ್ರದರ್ಶನ ನಡೆಸಲಾಯಿತು.

ಗೇರುಕಟ್ಟೆ, ಕೊರಂಜ ಪರಿಸರದ 20 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಭಾಗವಹಿಸಿದ ಪೋಷಕರಿಗೂ ಸಂಸ್ಕಾರ ಬಿಂದು ಪುಸ್ತಕವನ್ನು ನೀಡಲಾಯಿತು

ವಾಣಿ ಹರೀಶ ಆಚಾರ್ಯ ಸ್ವಾಗತಿಸಿ ಪ್ರೇಷಿತ ರಾಜೇಶ್ ವಂದಿಸಿದರು. ಪ್ರತಿಷ್ಠಾನದ ಸಂಚಾಲಕಿ ಭಾರತಿ ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು. ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನ, ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ.ಉಪ್ಪಿನಂಗಡಿ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಗೇರುಕಟ್ಟೆ ಸಹಕಾರ ನೀಡಿದ್ದರು.

Related posts

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಪಟ್ರಮೆ: ಕೂಡಿಗೆ ಸೇತುವೆ ಅಡಿಯಲ್ಲಿ ಯುವಕನ ಶವ ಪತ್ತೆ

Suddi Udaya

ಬೆಳ್ತಂಗಡಿ : ದಕ್ಷ ಅಧಿಕಾರಿ,ಅಬಕಾರಿ ನಿರೀಕ್ಷಕರಾದ ಸೌಮ್ಯಲತಾರವರಿಗೆ ಪದೋನ್ನತಿ: ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ ವರ್ಗಾವಣೆ

Suddi Udaya

ಜೂ.14: ಅಳದಂಗಡಿಯಲ್ಲಿ 24ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ – ಕಂಪ್ಯೂಟರ್ ವಿತರಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದಿಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಕೊಡುಗೆ

Suddi Udaya

ಶಿಬಾಜೆ ಗ್ರಾ.ಪಂ. ನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೀತಾರಾಮ ಎಸ್ ಅಧಿಕಾರ ಸ್ವೀಕಾರ

Suddi Udaya
error: Content is protected !!