ನಿಡ್ಲೆ: ಇಲ್ಲಿಯ ಬರೆಂಗಾಯ ಮಹಮ್ಮಾಯಿ-ದೈವರಾಜ ಗುಳಿಗ ಕ್ಷೇತ್ರದಲ್ಲಿ ವೇದಮೂರ್ತಿ ರವಿ ಕುಮಾರ್ ಭಟ್ ಪಜಿರಡ್ಕ ಇವರ ನೇತೃತ್ವದಲ್ಲಿ ಮಹಮ್ಮಾಯಿ-ದೈವರಾಜ ಗುಳಿಗ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವವು ಮೇ 10ರಂದು ನಡೆಯಿತು.

ಬೆಳಿಗ್ಗೆ ಮಹಮ್ಮಾಯಿ ಮತ್ತು ದೈವರಾಜ ಗುಳಿಗ ದೈವದ ಪ್ರತಿಷ್ಠೆ ನಡೆದು ನಂತರ ಬಜಿಲ ಪೂಜೆ (ರಾಶಿ ಪೂಜೆ), ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬೈಲಮಾರಿ ಮತ್ತು ದೈವರಾಜ ಗುಳಿಗ ದೈವದ ನೇಮೋತ್ಸವ ನಡೆಯಿತು.

ಈ ವೇಳೆ ನೂತನ ಕಟ್ಟೆಗೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ, ಕಾರ್ಯದರ್ಶಿ ಧನಂಜಯ ಕಜೆ, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.













