24.7 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಸರಕಾರ ನೂತನವಾಗಿ ಆದೇಶ ಮಾಡಿರುವ ಕೃಷಿಕನಿಗೆ ಅವಶ್ಯಕತೆಯಿರುವ ಮಿಷನ್ಗಳಿಗೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇಟ್ಟುಕೊಳ್ಳಲು ನಿರ್ಬಂಧ ನಿಷೇದ ಕಾನೂನು ಇದು ಖಂಡಿತ ಖಂಡನೀಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರ ನಿರ್ಧಾರವನ್ನು ಖಂಡಿಸಿ ಈ ಕಾನೂನು ತೆರವುಗೊಳಿಸಿ ರೈತರ ಹಿತ ಅಗತ್ಯವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಡೆಯಿಂದ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ರೈತರ ಅಡಿಕೆ ಕೃಷಿ ಅವಶ್ಯಕತೆಯಿರುವ ಮೈಲುತುತ್ತು ರಾಸಾಯನಿಕ ಗೊಬ್ಬರ ಬೆಲೆ ಗಗನ ಮುಟ್ಟಿದೆ. ಅಡಿಕೆ ಬೆಲೆ ಏರಿಕೆ ಆಗದೆ ಸ್ಥಿರ ನಿಂತಿದೆ. ಈ ಮದ್ಯೆ ರೈತರು ಇರುವ ತೋಟಗಳ ಉಳಿಸಲು ಹಿಂಗಾರಕ್ಕೆ ಔಷಧಿ ಸಿಂಪಡನೇ, ಕಳೆ ಕೀಳಲು, ಮಿಷನ್ ಬಳಕೆಗೆ ಪೆಟ್ರೋಲ್ ಕನಿಷ್ಠ 10 ಲೀಟರ್ ವರೆಗೆ ಅಗತ್ಯ ಇರುತ್ತದೆ. ಒಂದು ಲೀಟರ್ಗೋಸ್ಕರ ಪಂಪ್ ಗೆ ಹೋಗಲು ಪದೇ ಪದೇ ಸಾಧ್ಯ ಇಲ್ಲ.ನಮ್ಮಂತವರ ಸಣ್ಣ ಉತ್ಸಾಹಿ ಕೃಷಿಕರ ಬಗ್ಗೆ ಸರಕಾರಗಳು ಪ್ರೋತ್ಸಾಹ ಮಾಡಿದಾಗ ಮಾತ್ರ ನಿಜವಾದ ಆತ್ಮ ನಿರ್ಭರ ಭಾರತ ಮೂಡಿಬರಲು ಸಾಧ್ಯ.ಇಲ್ಲದಿದ್ದರೆ ರೈತರ ತೋಟಗಳು ಸರಕಾರದ ಈ ಕಾನೂನುಗಳಿಂದ ಹಾನಿಯಾದರೆ ಯಾರೂ ಕೂಡ ನಷ್ಟ ನೀಡುದಿಲ್ಲ. ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Related posts

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ “ಫ್ಯೂಚರ್ ಹೆಚ್ ಆರ್ ಲೀಡರ್ಸ್” ವಿಶೇಷ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ನಾಪತ್ತೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಉಳ್ಳಾಲ ಖಾಝಿಯಾಗಿ ಶೈಖುನಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನೇಮಕ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ ಶಾಲೆಯಲ್ಲಿ ಆಟಿದ ಗಮ್ಮತ್

Suddi Udaya
error: Content is protected !!