ಇಂದಬೆಟ್ಟು : ಕಲ್ಲಾಜೆ ನವಭಾರತ್ ಗೆಳೆಯರ ಬಳಗ , ಇದರ 2025-26 ನೇ ಸಾಲಿನ 13 ನೇ ವರ್ಷದ ವಾರ್ಷಿಕ ಮಹಾಸಭೆ ಕಲ್ಲಾಜೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿ, ವಿನೋದ್ ಪ್ರಸಾದ್ ಕಲ್ಲಾಜೆ 2025-26 ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮತ್ತು ವರದಿಯನ್ನು ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಉಂಬೆಜೆ, ಉಪಾಧ್ಯಕ್ಷರಾಗಿ ರಾಜೇಶ್ ಹೆಬ್ಬರಪಲ್ಕೆ, ಕಾರ್ಯದರ್ಶಿಯಾಗಿ ನಾಗೇಶ್ ಮುಂಡ್ರಬೆಟ್ಟು ,ಜೊತೆ ಕಾರ್ಯದರ್ಶಿಯಾಗಿ ಪ್ರತೀಶ್ ಕಡಿತ್ಯಾರ್, ಕೋಶಾಧಿಕಾರಿಯಾಗಿ ರಾಜಶೇಖರ್ ಕುವೆತ್ಯಾರ್, ಕ್ರೀಡಾ ನಿರ್ದೇಶಕರಾಗಿ ರಾಧಾಕೃಷ್ಣ ತುರ್ಕೆರಬೆಟ್ಟು, ಧಾರ್ಮಿಕ ನಿರ್ದೇಶಕರಾಗಿ ಸಂತೋಷ್ ಪಡಂಬಿಲ,
ಅವಿನಾಶ್ ಕಲ್ಲಾಜೆ , ಶೈಕ್ಷಣಿಕ ನಿರ್ದೇಶಕರಾಗಿ ಯತೀಶ್ ನೇರೋಳ್ದಪಲ್ಕೆ , ಆರೋಗ್ಯ ನಿರ್ದೇಶಕರಾಗಿ ಪ್ರತೀಕ್ಷ್ ಹಾನಿಬೆಟ್ಟು, ಮಾಧ್ಯಮ ನಿರ್ದೇಶಕರಾಗಿ ವಿನೋದ್ ಪ್ರಸಾದ್ ಕಲ್ಲಾಜೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.












