24.1 C
ಪುತ್ತೂರು, ಬೆಳ್ತಂಗಡಿ
September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (ಕೆ.ಡಿ.ಸಿ) ನೂತನ ಆಡಳಿತ ಮಂಡಳಿ ರಚನೆ

ಬೆಳ್ತಂಗಡಿ; ಕಾಜೂರಿನ ಅಭಿವೃದ್ಧಿ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಮುದಾಯದ ಏಳಿಗೆಯ ಕನಸನ್ನು ಹೊತ್ತು ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಯುವ ಮಿತ್ರರ ತಂಡವಾದ ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (ಕೆ.ಡಿ.ಸಿ) ಇದರ ನೂತನ ಸಾಲಿನ ಆಡಳಿತ ಮಂಡಳಿ ರಚನೆಯು ಇತ್ತೀಚೆಗೆ ಜರುಗಿತು.

ಸ್ವಂತ ಕುಟುಂಬ, ಉದ್ಯೋಗ ಮತ್ತು ಪ್ರವಾಸಿ ಜೀವನದ ಜವಾಬ್ದಾರಿಗಳ ನಡುವೆ ಬಿಡುವಿನ ಸಮಯವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟು, ಊರಿನ ಒಳಿತಿಗಾಗಿ ವಿವಿಧ ಯೋಜನೆಗಳು ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಊರಿನ ಬಗ್ಗೆ ಕಾಳಜಿ, ಸಮಾಜದ ಬಗ್ಗೆ ಬದ್ಧತೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವ ಸಂಕಲ್ಪದೊಂದಿಗೆ‌ ಈ ಸಮಿತಿ ಕಾರ್ಯನಿರ್ವಹಿಸುತ್ತದೆ.

ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಲ್ಲಿ ಮುನ್ನಡೆಯುವ ಕೆಡಿಸಿ ಸಮಿತಿಯ ಮಹಾಸಭೆಯು ನಡೆದು ಮುಂದಿನ ಸಾಲಿನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಶರೀಫ್ ಜೆ.ಹೆಚ್ ಕಾಜೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ವಹಾಬ್ ಅಝ್ಹರಿ, ಕೋಶಾಧಿಕಾರಿಯಾಗಿ ಸಿದ್ದೀಕ್ ಪಿ.ಎ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿಕಂದರ್ ಹೇಡ್ಯಾ, ಜಾಬಿರ್ ಕಾಜೂರು, ಲತೀಫ್ ಪಿ.ಎ, ಮನ್ಸೂರ್ ಡಿ.ಹೆಚ್, ಸುಹೈಬ್ ಕಾಜೂರು, ನವಾಝ್ ಕಾಜೂರು, ಮುಹಮ್ಮದ್ ಹಾಶಿಂ ಕಾಜೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಹನೀಫ್ ಕೆ ಎಂ, ಇಬ್ರಾಹಿಂ ಇಬ್ಬಿ, ಹಾರಿಸ್ ಜೆ.ಹೆಚ್, ಇಸ್ಮಾಯಿಲ್ ಹಾಜಿ ಮಕ್ಕ, ಸಿನಾನ್ ಬಹ್ರೈನ್, ಫಾರೂಕ್ ಜೆ.ಹೆಚ್, ರಫೀಕ್ ಕಾಜೂರು, ಸಫ್ವಾನ್ ಇವರನ್ನು ಆರಿಸಲಾಯಿತು.
ಸಯ್ಯಿದ್ ಕಾಜೂರು ತಂಙಳ್ ಗೌರವಾಧ್ಯಕ್ಷರಾಗಿಯೂ, ಕೆ ಯು ಮುಹಮ್ಮದ್ ಸಖಾಫಿ ಅವರು ಡೈರೆಕ್ಟರಾಗಿ ಎಂದಿನಂತೆ ಮಹಾಸಭೆಯಲ್ಲಿ ಅವಿರೋಧವಾಗಿ ನೇಮಕಗೊಂಡಿದ್ದಾರೆ.

Related posts

ಉಜಿರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್‌ ಆಚರಣೆ

Suddi Udaya

ಬೆಳ್ತಂಗಡಿ: ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್.ಐ.ಟಿ ನೋಟಿಸ್

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆಂಪೇಗೌಡ ಜಯಂತಿ ಆಚರಣೆ

Suddi Udaya

ಕಲ್ಮಂಜ: ಕೃಷಿಕ ಶೀನ ಶೆಟ್ಟಿ ನಿಧನ

Suddi Udaya

ಶಿಬಾಜೆ ಸ.ಕಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಜಾವೆಲಿನ್ ಎಸೆತ: ಮಚ್ಚಿನ ಸ.ಪ್ರೌ. ಶಾಲಾ ವಿದ್ಯಾರ್ಥಿ ಮಹಮದ್ ಯಾಸ್ಮಿರ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!